Saturday 17 March 2018

ತಪ್ಪುಗಳನ್ನು ಹುಡುಕುವುದರಿಂದ ಸಂತಸವು ಹೆಚ್ಚಾಗುತ್ತದೆ!!

ಕೆಲ ಸಲ ನಾವೆಲ್ಲ ಯೋಚಿಸುತ್ತಿರುತ್ತೇವೆ
ಈ ಜಗತ್ತಿನಲ್ಲಿ ತಪ್ಪುಗಳನ್ನು ಹುಡುಕುವುದರಿಂದ ಹೇಗೆ ಸಂತಸವು ಹೆಚ್ಚಾಗುತ್ತದೆ ಎಂದು??
ಇದನ್ನು ಸ್ಪಷ್ಟಿಕರಿಸಿಕೊಳ್ಳಲು ಈಗ ನಿಮ್ಮ ಪ್ರೀತಿ ಪಾತ್ರರೊಡನೆ ತೀರಾ ಇತ್ತೀಚೆಗೆ ನೀವು ಮುನಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಿ.
ತಪ್ಪು ಎಲ್ಲರಿಂದಲೂ ಆಗುತ್ತವೆ. ತಪ್ಪುಗಳಿಂದಲೇ ತಾನೇ ನಾವು ಪಾಠ ಕಲಿಯುವುದು?!
ಆ ಮುನಿಸಿನ ಸನ್ನಿವೇಶದಲ್ಲಿ ನಿಮ್ಮಿಂದಾದ ತಪ್ಪಾದ ವರ್ತನೆಯನ್ನು ನೀವೇ ಯೋಚಿಸಿ ಹುಡುಕಿ. ಆಗ ನಿಮಗರಿವಾಗುತ್ತದೆ ನೀವೇ ಎನೋ ತಪ್ಪಾಗಿ ಇಲ್ಲವೇ ಒರಟಾಗಿ, ಅಸಂಬದ್ಧವಾಗಿ ಮಾತನಾಡಿರಬಹುದೆಂದು.
ನೀವು ಇದರ ಬಗ್ಗೆ ಯೋಚಿಸಬಲ್ಲರಾದರೆ ತುಂಬಾ ಒಳ್ಳೆಯದು.
ಎಲ್ಲರ ತಲೆಯಲ್ಲಿ ಇಬ್ಬರು ವಕೀಲರಿದ್ದಾರೆ. ಆ ಇಬ್ಬರೂ ವಕೀಲರು ನಮಗಾಗಿ ತಮ್ಮ ವಾದವನ್ನು ಮಂಡಿಸುತ್ತಲೇ ಇರುತ್ತಾರೆ. ಸಮಾಧಾನದಿಂದ ಆ ವಾದವನ್ನು ಕೇಳಿದರೆ ಒಬ್ಬ ವಕೀಲ ನೀವು ಸರಿ ಎಂದು ವಾದ ಮಾಡಿದರೆ ಇನ್ನೊಬ್ಬ ವಕೀಲ ನೀವು ತಪ್ಪೆಂದು ವಾದ ಮಾಡುತ್ತಿರುತ್ತಾನೆ.
ಈಗ ನೀವು ಏರಡನೇ ವಕೀಲನ ವಾದಕ್ಕೆ ಹೆಚ್ಚಿನ ಗಮನ ನೀಡಿ ನಿಮ್ಮಿಂದಾದ ಯಾವುದಾದರೂ ತಪ್ಪನ್ನು ಒಪ್ಪಿಕೊಂಡಾಗ ಆ ಕ್ಷಣದಲ್ಲಿ ನಿಮ್ಮ ಮನಸಿಗೆ ನೋವಾಗಬಹುದು ಆದರೆ ಆ ಎರಡನೇ ವಕೀಲನನ್ನು ಆತನ ವಾದ ಮುಂದುವರೆಸಲು ಬಿಟ್ಟಾಗ ಆತ ನಿಮ್ಮಿಂದಾದ ಎಲ್ಲ ತಪ್ಪುಗಳ ಸತ್ಯಾಂಶಗಳನ್ನು ನಿಮ್ಮ ಮುಂದೆ ಹಾಜರು ಪಡಿಸುತ್ತಾನೆ. ಆಗ ನಿಮಗೆ ನಿಮ್ಮಿಂದಾದ ತಪ್ಪಿನ ಅರಿವಾದಾಗ ಮೊದಲು ನಿಮ್ಮ ಮನಸಿಗೆ ನೋವಾಗುತ್ತದಾದರೂ ನೀವು ನಿಮ್ಮ ಮನಸಿನಾಳದಲ್ಲೆಲ್ಲೋ ನಿಮಗೆ ಗೊತ್ತಿಲ್ಲದೇ ಖುಷಿಯ ಹೆಮ್ಮೆಯ ಭಾವ ಮೂಡುತ್ತದೆ. ಏಕೆಂದರೆ ನಿಮಗೆ ನಿಮ್ಮಿಂದಾದ ನಿಮ್ಮದೇ ವರ್ತನೆಯ ಅರಿವಾಗಿರುತ್ತದೆ.
ವಾವ್ ಎಷ್ಟೊಂದು ಸರಳ ಮತ್ತು ಖುಷಿಯ ವಿಚಾರವಲ್ಲವೇ?
ನಮ್ಮ ತಪ್ಪಿನ ಅರಿವು ನಮಗಾದಾಗ ನಾವು ಅದನ್ನು ಒಪ್ಪಿಕೊಳ್ಳುವುದನ್ನು ಕಲಿತರೆ, ಖುಷಿಯು ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ.
ನಾವೆಲ್ಲ ಇದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮಲ್ಲಿ ಬದಲಾವಣೆಯ ಪರ್ವ ಕಂಡುಬರುತ್ತದೆ..

Friday 16 March 2018

"ಇಂದು" ಎಂಬ ಸುಂದರ ಸುದಿನ🙂

ನಿನ್ನೆಗಳ ಯಾರೂ ಹೊತ್ತು ತರಲು ಸಾಧ್ಯವಿಲ್ಲ,
ನಾಳೆಗಳು ಯಾರಿಗೂ ತಿಳಿದಿಲ್ಲ.. ಆದರೆ  "ಇಂದು" ಎಂಬ ಸುಂದರ ಸುದಿನ ನಮ್ಮೊಂದಿಗಿದೆ.
ಈ ಕ್ಷಣ ಎಂಬುದು ಬದುಕಿನ  ಸಮಯದ ಬಹು ಮುಖ್ಯ ಮತ್ತು ವಾಸ್ತವಿಕ ಪಾತ್ರ. ಜೀವನದ ಪ್ರತೀ ಕ್ಷಣವನ್ನು ಪ್ರೀತಿಯಿಂದ ಸ್ವಾಗತಿಸಿದರೆ ಬದುಕೇ ಪ್ರೀತಿಯ ಹೊಳೆಯಾಗಿ ಹರಿಯುತ್ತದೆ..❤️