tag:blogger.com,1999:blog-52295843881144972272024-03-19T14:06:05.854-07:00ಹಾಗೆ ಸುಮ್ಮನೆAnonymoushttp://www.blogger.com/profile/08569784804915074890noreply@blogger.comBlogger22125tag:blogger.com,1999:blog-5229584388114497227.post-48171694374545081942019-03-20T13:22:00.001-07:002019-03-20T20:03:16.740-07:00Play a pet friendly and safe Holi🤗<div dir="ltr" style="text-align: left;" trbidi="on">
As being pet parents and pet lovers it's our responsibility to help our furry kids and furry friends to remain safe. Holi is a festival for human beings not for the pets and other animals on the street.<br />
Every year during holi occasion many people involve their beloved pets or Street animals in this colour play for fun and photography purpose.<br />
The colours are not at all safe and it has greater negative impact on Dogs & other animals. Holi colours are full of chemicals like lead oxide, Mercury Sulphate and much more which has a deadliest impact on animals as well as on humans. Animals and small kids are very much susceptible to holi colours. Due to the presence of harmful chemicals in Holi colours which causes a lot of problem and discomfort to our pets.<br />
<br />
Some noticeable impacts are:<br />
*Skin Irritation<br />
*Water balloons causes eyes damage<br />
*Respiratory troubles<br />
*Allergies<br />
*Colours if consumed acts as a slow poison<br />
*Vomiting<br />
*Loose Motion<br />
*Behavioural change like aggression, getting scared, panic attacks<br />
<br />
Tips to follow and keep animals safe during holi:<br />
●Induce vomiting if the animal has mistakenly ingests the colour.<br />
●Wash the dog or victim animal's eyes with water if colour comes in contact.<br />
●If the condition is severe, visit a vet.<br />
<br />
What a small contribution we can do for a pet & human safe holi?<br />
◆Educate the kids about the harmful effects of holi colours and how to play safe and pet friendly holi.<br />
◆As this holi is not only a festival of colours but also of sweets, avoid feeding sweet dishes for the pets it can imbalance the glucose levels in their bodies and sweets are poisonous to animals.<br />
◆Avoid taking pets out of home. Make sure your pet is safe at home not exposing to the harmful colours and noise.<br />
◆If your pet or any other street animal is being victim to the colours then one has to handle the situation very carefully and never try to wash them using kerosine or other harmful oils. Because these harmful oils can penetrate the skin lining and worsen the skin health of the animal. Instead you can use coconut oil to remove the colours and then wash with shampoo and ample amount of water.<br />
◆If you find any animal is being a victim for holi and suffering from any infection or problem then please inform local dog care NGOs so that they can rescue the animals.<br />
Or as being a kind human being even you can also take it to the vet and help the needy animals.<br />
◆Dont feed any alcoholic products to the animals.<br />
◆Dont play with water balloons it is harmful for animals as well as small kids. And please don't forget that holi is for human beings not for other animals.<br />
◆ Provide clean and sufficient water to the animals.<br />
◆ Keep veterinary doctors contact numbers standby to help the needy animals.<br />
And <strong>always remember what's good for you isn't good for furry friends.</strong><br />
<h2 style="clear: both; text-align: center;">
<strong><img border="0" data-original-height="901" data-original-width="1600" height="180" src="https://blogger.googleusercontent.com/img/b/R29vZ2xl/AVvXsEidx2JASs9AENVE2P7-thGen4iCCSEUXKfMxOBqcVMB5yx4-Yb3gERzY-yjbUd6sPuK2SYAz-pHtiXN0rb4EcZ-66HHinHq5Dra5cIyTyRRbdb2MnRYrKgOD8RXs7nZFSwscn9D5YdA04Vd/s320/IMG_20190223_081647-01.jpeg" width="320" /><a href="https://archanayatish.wordpress.com/2019/03/20/play-a-pet-friendly-safe-holi%f0%9f%a4%97/">https://archanayatish.wordpress.com/2019/03/20/play-a-pet-friendly-safe-holi%f0%9f%a4%97/</a></strong></h2>
<br />
<strong>(P.S: Don't colour animals on holi and do not try to use any type of colours on animals may it be yours or street's - Just so you'd know, painting, coloring or using chemicals on animals is seriously punishable under Section 11 of the Prevention of Cruelty to Animals Act, 196</strong><b>0.)</b><br />
Lets be kind and celebrate a cruelty free, pet friendly and safe holi!<br />
Have a pawsome Holi!!</div>
Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-47882880758340810612019-03-07T01:38:00.002-08:002019-03-07T07:33:52.295-08:00ಸಂತ ಶಿಶುನಾಳ ಶರೀಫ<div dir="ltr" style="text-align: left;" trbidi="on">
ಮಾರ್ಚ್ 7 ಭಾವೈಕ್ಯಕೆಯ ಹರಿಕಾರ ಸಂತ ಶಿಶುನಾಳ ಶರೀಫರ ಜನ್ಮದಿನ.<br />
ಶಿಶುನಾಳ ಶರೀಫರು ಕರ್ನಾಟಕದ ಕಬೀರ್ ದಾಸ್ ಎಂದೇ ಪ್ರಸಿದ್ಧರಾಗಿದ್ದು ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ. ಕರ್ನಾಟಕದ ಮೊದಲನೆಯ ಮುಸ್ಲಿಂ ಕವಿ ಎಂಬ ಖ್ಯಾತಿ ಕೂಡ ಅವರಿಗಿದೆ.ಇಮಾಮ್ ಸಾಹೇಬ್ ಮತ್ತು ಹಾಜುಮಾ ಎಂಬ ದಂಪತಿಗಳ ಮಗನಾಗಿ ಜನಿಸಿದ ಶರೀಫರ ಹುಟ್ಟೂರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ (ಶಿಶುನಾಳ) ಶಿಶುವಿನಹಾಳ ಎಂಬ ಚಿಕ್ಕ ಗ್ರಾಮ.<br />
ಅಲ್ಲಿಯೇ ಕನ್ನಡ ಮತ್ತು ಉರ್ದು ಶಿಕ್ಷಣ ಪಡೆದು<br />
ಉಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವಾಗ ನಾನೇನು ಮಾಡುತ್ತಿದ್ದೇನೆ? ಬೇರೆಯವರಿಗೆ ಕಲಿಸುವ ಅರ್ಹತೆ ನನಗಿದೆಯೇ? ಎಂಬ ಪ್ರಶ್ನೆಗಳು ಅವರಿಗೆ ಕಾಡತೊಡಗಿದಾಗ ತಮ್ಮ ಶಿಕ್ಷಕ ವೃತ್ತಿಯನ್ನು ಬಿಟ್ಟು ತಮಗೆ ಸೂಕ್ತವಾದ ಗುರುವಿನ ಹುಡುಕಾಟಕ್ಕೆ ಅಲೆದಾಡುತ್ತಿರುವಾಗ ಕೊನೆಗೆ ಗುರು ಗೋವಿಂದ ಭಟ್ಟರನ್ನು ಭೇಟಿಯಾಗಿ ಅವರನ್ನು ತಮ್ಮ ಗುರುವೆಂದು ಸ್ವೀಕರಿಸುತ್ತಾರೆ. ದೇವಿಯ ಆರಾಧಕರಾಗಿದ್ದ ಗೋವಿಂದ ಭಟ್ಟರು ಬ್ರಾಹ್ಮಣರಾಗಿದ್ದರೂ ಸಂಪ್ರದಾಯ, ಮೂಢನಂಬಿಕೆಗಳ ಎಲ್ಲೆಯನ್ನು ಮೀರಿ ನಿಂತಿದ್ದರು. ಗುರುವಿನ ಒಡನಾಟದಿಂದ ತಮ್ಮ ಅರಿವಿನ ಬಾಗಿಲು ತೆರೆದಾಗ ಶರೀಫರು ಗುರುವಿನೊಡನೆ ಚರ್ಚೆ, ಮಾತು, ಕಲಿಕೆಯಲ್ಲೇ ಹೆಚ್ಚಿನ ಸಮಯ ಕಳೆಯಲಾರಂಭಿಸಿ ಮನೆಗೆ ಹೋಗುವುದನ್ನೇ ಕಡಿಮೆ ಮಾಡಿಬಿಟ್ಟರು. ಆಗ ಊರಿನ ಜನ ಶರೀಫರ ಕುಟುಂಬದವರಿಗೆ "ಆ ಜನಿವಾರದವನ ಜೊತೆ ಶರೀಫನಿಗೇನು ಕೆಲಸ?" ಎಂಬೆಲ್ಲ ಪ್ರಶ್ನೆಗಳನ್ನು ಕೇಳತೊಡಗಿದಾಗ ಹೀಗೆ ಬಿಟ್ಟರೆ ಶರೀಫ ಕೈ ತಪ್ಪಿ ಹೋಗುತ್ತಾನೆಂಬ ಭಯದಿಂದ ಶರೀಫರ ಮನವೊಲಿಸಿ ಫಾತಿಮಾ ಎಂಬ ಹೆಣ್ಣುಮಗಳ ಜೊತೆ ಶರೀಫರ ಮದುವೆ ಮಾಡಿದರು.<br />
ಶರೀಫರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ಹೆಂಡತಿಯನ್ನು ತುಂಬಾ ಪ್ರೀತಿಸತೊಡಗಿದರು. ಹೆಂಡತಿಯ ಒಡನಾಟದಲ್ಲಿ ಶರೀಫರು ಬೆಟ್ಟದಷ್ಟು ಜ್ಞಾನ, ಪ್ರೀತಿಯನ್ನು ಪಡೆದರು. ಮೊದಲ ಹೆರಿಗೆಯಲ್ಲಿ ಶರೀಫರ ಮಡದಿ, ಮಗು ಇಹಲೋಕ ತ್ಯಜಿಸಿದಾಗ ಶರೀಫರಿಗೆ ಜೀವನದ ಮೇಲೆ ತುಂಬಾ ಬೇಸರವಾದರೂ, ದುಃಖಿಸುತ್ತ ಕೂರದೆ <br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEibidUDBp3drq1JJlaKpswpKvuOFFAumdLQQj2-vDrkh8hdMjQVhdhATKPW-qGXNj0SAKEy_CBK0zPVqgll0OInykvRj8hlEpd5XV3BpOnnnbP9QM0j5swMceg6jawLie-NVHfKjRynIXSw/s1600/IMG_20180602_114714-01.jpeg" imageanchor="1" style="margin-left: 1em; margin-right: 1em;"><img border="0" data-original-height="1200" data-original-width="1600" height="240" src="https://blogger.googleusercontent.com/img/b/R29vZ2xl/AVvXsEibidUDBp3drq1JJlaKpswpKvuOFFAumdLQQj2-vDrkh8hdMjQVhdhATKPW-qGXNj0SAKEy_CBK0zPVqgll0OInykvRj8hlEpd5XV3BpOnnnbP9QM0j5swMceg6jawLie-NVHfKjRynIXSw/s320/IMG_20180602_114714-01.jpeg" width="320" /></a></div>
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhdtzhJ1SKFOPnEfxyo_AIfD1OVndIaU3MuAXhWgy_n04chZxz1VQFMow8YxEmURSMWXNCj3K28_yQPodTdoI39lqaf6TLU4yJar0MBbXYAb1LRUhjd9XKhiBgJDKPLmFm_II5ndEItnO3j/s1600/IMG_20180602_114750-01.jpeg" imageanchor="1" style="margin-left: 1em; margin-right: 1em;"><img border="0" data-original-height="1600" data-original-width="1200" height="320" src="https://blogger.googleusercontent.com/img/b/R29vZ2xl/AVvXsEhdtzhJ1SKFOPnEfxyo_AIfD1OVndIaU3MuAXhWgy_n04chZxz1VQFMow8YxEmURSMWXNCj3K28_yQPodTdoI39lqaf6TLU4yJar0MBbXYAb1LRUhjd9XKhiBgJDKPLmFm_II5ndEItnO3j/s320/IMG_20180602_114750-01.jpeg" width="240" /></a></div>
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjlU7qQ8fUCoeLITTrBQNQhhtMLZrDNYhUP_dvkyUtH1qMYqqCdYsQv5AGFmk2Q5KC2Z6xVldsVfpS2O3uQQ5UDY7oYBS09NsB4HBqbOYMt8-FulAeZJMc-Fge06vSRWNTlo2rwFPkfTKLt/s1600/IMG_20180602_115655_HDR-01.jpeg" imageanchor="1" style="margin-left: 1em; margin-right: 1em;"><img border="0" data-original-height="1200" data-original-width="1600" height="240" src="https://blogger.googleusercontent.com/img/b/R29vZ2xl/AVvXsEjlU7qQ8fUCoeLITTrBQNQhhtMLZrDNYhUP_dvkyUtH1qMYqqCdYsQv5AGFmk2Q5KC2Z6xVldsVfpS2O3uQQ5UDY7oYBS09NsB4HBqbOYMt8-FulAeZJMc-Fge06vSRWNTlo2rwFPkfTKLt/s320/IMG_20180602_115655_HDR-01.jpeg" width="320" /></a></div>
ದೇವರಲ್ಲಿ ನಂಬಿಕೆಯಿಟ್ಟು ಗುರು ಗೋವಿಂದರೊಡಗೂಡಿ ಮಂದಿರ-ಮಸೀದಿ ಅಲೆಯುತ್ತ ಜ್ಞಾನದ ಸಾಗರವನ್ನೇ ಹರಿಸಿ ಈ ಇಬ್ಬರು ದೈವೀ ಪುರುಷರು ಅನೇಕ ಪವಾಡಗಳನ್ನು ಮಾಡಿದ್ದಾರೆ.<br />
ಶರೀಫರು ತಮ್ಮ ಜೀವನವನ್ನೇ ಪಾರಮಾರ್ಥದ ಸಾಧನೆಗೆ ಮೀಸಲಿಟ್ಟು ಅನೇಕ ತತ್ವಪದಗಳನ್ನು ರಚಿಸಿದ್ದಾರೆ.<br />
ಅವರ ಪದಗಳು ಆಡು ಭಾಷೆಯಲ್ಲಿದ್ದು ಜನಸಾಮಾನ್ಯರ ಮನಕ್ಕೆ ಮುಟ್ಟುವಂತಹವಾಗಿವೆ. ತುಂಬಾ ಗಹನವಾದ ಅಧ್ಯಾತ್ಮ ವಿಚಾರಧಾರೆಗಳನ್ನು ಅವರ ಪದಗಳಲ್ಲಿ ಕಾಣಬಹುದು. ಗುರು ಗೋವಿಂದ ಭಟ್ಟರಷ್ಟೇ ಅಲ್ಲದೇ<br />
ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ, ಅಡವಿ ಸ್ವಾಮಿ, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳೂ ಶರೀಫರ ಮೇಲೆ ಪ್ರಭಾವ ಬೀರಿದ ಮಹಾನ್ ಪುರುಷರು. ಉರ್ದು ಮಿಶ್ರಿತ ಕನ್ನಡದ ಆಡು ಭಾಷೆಯಲ್ಲಿನ ಶರೀಫರ ತತ್ವಪದಗಳು ಒಗಟಿನ ರೂಪದಲ್ಲಿದ್ದು ಅದರಲ್ಲಿನ ಸಾರವನ್ನು ಅರಿಯುವುದೇ ಒಂದು ಕಲಿಕೆಯಾಗಿದೆ. ಶರೀಫರು ಸುಮಾರು 400 ಪದಗಳನ್ನು ರಚಿಸಿದ್ದು ಅವುಗಳಲ್ಲಿ ಸಾಕಷ್ಟು ಪದಗಳು ಹಾಡುಗಳ ರೂಪದಲ್ಲಿ ಪ್ರಸಿದ್ದಿ ಹೊಂದಿವೆ. ಹೆಸರಾಂತ ಗಾಯಕ ಸಿ.ಅಶ್ವಥ್ ಮತ್ತು ಮೊದಲಾದವರ ಧ್ವನಿಯಲ್ಲಿ ಶರೀಫರ ಹಾಡುಗಳು ಕನ್ನಡ ಸಂಗೀತ ಲೋಕದಲ್ಲಿ ಜನಪದ ಅಲೆಯನ್ನೇ ಮೂಡಿಸಿವೆ.<br />
ಶರೀಫರ ಕಾಲಾನಂತರ ಅವರ ಅಂತ್ಯಕ್ರಿಯೆಯನ್ನು ಹಿಂದು ಹಾಗು ಮುಸ್ಲಿಮರು ಕೂಡಿಯೇ ಮಾಡಿದರು. ಶರೀಫರ ತಂದೆ,ತಾಯಿಗಳ ಸಮಾಧಿಯ ಪಕ್ಕದಲ್ಲಿಯೇ ಶರೀಫರ ಸಮಾಧಿಯಾಯಿತು. ನಂತರ ದೊಡ್ಡ ಗದ್ದುಗೆಯನ್ನೇ ನಿರ್ಮಿಸಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ನಾಂದಿ ಹಾಡಿದರು. ಈ ಗದ್ದುಗೆಯು ಯಾವುದೇ ಧರ್ಮದ ಮಾದರಿಯಲ್ಲಿ ಇಲ್ಲ. ವಿಶಾಲವಾದ ಕಟ್ಟೆ, ಆ ಕಟ್ಟೆಯ ಮೇಲೆ ಗುರು ಗೋವಿಂದ- ಶರೀಫರ ಮೂರ್ತಿಗಳು ಮತ್ತು ನೆರಳು ನೀಡುವ ಬೃಹತ್ ಮರ. ಈ ಮರವು ತುಂಬಾ ವಿಶಿಷ್ಟವಾಗಿದ್ದ ಬೇವಿನ ಮರವಾಗಿದ್ದು ಇದರಲ್ಲಿ ಮಲ್ಲಿಗೆಯ ಬಳ್ಳಿಯೂ ಹಬ್ಬಿಕೊಂಡಿದೆ. ಗದ್ದುಗೆಗೆ ಹಿಂದೂ-ಮುಸಲ್ಮಾನ ಎರಡೂ ಪದ್ಧತಿಯ ಪ್ರಕಾರ ಪೂಜೆ ಸಲ್ಲಿಸುತ್ತಾರೆ.ಈ ಗದ್ದುಗೆ ಎಲ್ಲ ಜಾತಿ, ಮತ, ಧರ್ಮಗಳ ಎಲ್ಲೇ ಮೀರಿ ತುಂಬಾ ಭಕ್ತಿ ಭಾವಗಳಿಂದ ಪೂಜಿಸಲ್ಪಡುತ್ತಿದೆ. ಇಂದಿಗೂ ಕೂಡ ಶರೀಫರ ದೇವಕಾರ ಮನೆತನದವರು ಇಲ್ಲಿ ಪೂಜೆ ಮಾಡುತ್ತಾರೆ. </div>
Anonymoushttp://www.blogger.com/profile/08569784804915074890noreply@blogger.com2tag:blogger.com,1999:blog-5229584388114497227.post-25183733084582928672018-12-14T22:15:00.001-08:002018-12-14T22:15:09.821-08:00ಗೀಚಿದ್ದು ತುಂಬಾ years ago..<p dir="ltr">FBಲೀ  ತುಂಬಾ Years Ago ಗೀಚಿದ್ದು :</p>
<p dir="ltr"> ಶಾಪಿಂಗ್ ಮುಗಿಸಿ ಮನೆಗೆ ಬರುವಾಗ ಅಚಾನಕ್ ಆಗಿ ಅಣ್ಣ-ಅತ್ತಿಗೆ ಸಿಕ್ರು. . ತುಂಬಾ ದಿನಗಳ ನಂತರ ಭೇಟಿಯಾಗಿದ್ದರಿಂದ ಬೇಡ ಬೇಡ ಅಂದ್ರು ಒತ್ತಾಯಿಸಿ ಮನೆಗೆ ಕರೆದುಕೊಂಡು ಹೋದರು. . ನಮ್ಮೆಲ್ಲರ ಹಾಳು ಹರಟೆ ತರಲೆ ಕಿಟಲೇ ಆದಮೇಲೆ ಅತ್ತಿಗೆ ನನ್ನ favourite dishes cook ಮಾಡಿದ್ರು, ಹೇಗೂ ನನ್ ಕಾಲೇಜಿನ vacation holidays ಇರೊದ್ರಿಂದ ನಾನು ಸಖತ್ ಆಗಿ ಊಟ ಮಾಡಿ ನನ್ನ ಮನೆಗೆ ಹೊರಡಲು ready ಆದೆ ಸಮಯ ಹತ್ತಾಗಿತ್ತು, ಹೊತ್ತಾಗಿದೆ ನಾಳೆ ಹೋಗು ಅಂದ್ರು ಕೇಳಲಿಲ್ಲ, ಹಟ ಮಾಡಿ ಮನೆ ಮನೆಗೆ ಹೊರಟೆ ಅರ್ಧ ದಾರಿ ತಲುಪಿದ್ದೆ ಎಲ್ಲಿತ್ತೋ ಏನೊ ಮಳೆ ಧೋ ಅಂತ ಶುರುವಾಗೇ ಬಿಟ್ಟಿತು. .<br>
ಸಿಕ್ಕಿದ್ದೇ chance ಅಂತ ಮಳೆಲಿ ನೆನಕೊಂಡು ಮನೆಗೆ ಬಂದೆ :) , ಅಮ್ಮ ಮಳೇಲಿ ಯಾಕೆ ಬಂದೆ ಅಂತ ಬೈದ್ರು, ಸುಮ್ಮನೆ ಬೈಗುಳಾನೇ ಜೋಗುಳ ಅಂದುಕೊಂಡು ಮಲಗಿದೆ..! ಬೆಳಿಗ್ಗೆ ಕಣ್ಣು ಬಿಟ್ಟಾಗ ಸಮಯ ಬರೋಬ್ಬರಿ ಒಂಬತ್ತು ವರೆ!!!<br>
ದಿನಾ ಬೆಳಿಗ್ಗೆ ಕೌಶಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ,  ರಾಮ ನಾಮ, ಹರಿ ನಾಮ, ದೇವಿ ಸ್ತುತಿ ಇನ್ನೂ ಏನೇನೋ ದೇವರ ನಾಮಗಳಿಂದ ಶುರುವಾಗೋ ದಿನ ಇವತ್ತು ನನ್ನ ನಾಮಾವಳಿ ಮನೇಲಿ..! ;)<br>
ಹೆಣ್ಣು ಮಕ್ಕಳು ಬೇಗ ಎದ್ದೇಳಬೇಕು, ರಜೆ ಸಿಕ್ರೇ ನಂಗೆ ಸಜೆ, ತುಂಬಾ ಆಲಸಿ ನೀನು ಅಂತ ಅಮ್ಮ ಬೆಳಗಿನಿಂದ ಬೈತಾನೇ ಇದ್ದಾರೆ, ನಾನ್ ಯಾವಾಗ ದೇವರನ್ನೇ replace ಮಾಡಿದೆ ಇದು ನನ್ನ ಹೆಸರಿನ effect ಇರಬಹುದು ಹೆಸರಿನಲ್ಲೇನಿದೆ ಅಂತ ಕೇಳ್ತಿದ್ದ ನಂಗೆ ಒಳ್ಳೆ ಉತ್ತರ ಸಿಕ್ತು ಅಂದುಕೊಂಡು hot coffee ಜೊತೆ newspaper ಓದುತ್ತಿರುವಾಗ ಶುರುವಾಯ್ತು ನೋಡಿ morning pings. .hi, hello good morning, coffee?tea? Tiffin? ಅಂತ ಆ ಕಡೆಯಿಂದ friends ಕುಶಲೋಪರಿ enquiry. .<br>
ನನ್ನ ಸುಪ್ರಭಾತ ಕತೆ ಕೇಳಿ ನನ್ನ ಒಬ್ಬಳು ತುಂಬಾ ಆತ್ಮೀಯ one among my sisters ತರಹ ಇರೋ friend ಮೇಘಾ ನಿಂತಳು ಅಮ್ಮಂಗೆ supportive  ಆಗಿ ನಂಗೆ oppose ಮಾಡ್ತಾ ಒಂದು ದೊಡ್ಡ lecture ಕೊಟ್ಟು you are not a baby still c'mon be responsible learn house hold works, mom will not come to your hubby home to help you out all the time, to serve till your table ಈಗಾಗಲೇ ಕಲಿಲಿಲ್ಲಾ ಅಂದರೆ ಇನ್ ಯಾವಾಗ ಕಲಿತಿ ಅಂತ ನನ್ನ vacation holidaysನಾ working days ಆಗಿ convert ಮಾಡಿ take care ಅಂತ ಹೇಳಿ ಹೋದಳು.!<br>
ನಾನೋ easy taking bubbly natured cool minded girl ಯಾರ ಬುದ್ದಿವಾದವನ್ನು ತಪ್ಪಾಗಿ ಪರಿಗಣಿಸದ life is all about learning ಅಂದುಕೊಂಡಿರೊ ಭಾವನಾತ್ಮಕ ಜೀವಿ, ಅಮ್ಮನನ್ನು ರಮಿಸಿ ನಮಿಸಿ ಕೈಲಾದಷ್ಟು ಅವಳಿಗೆ  ಸಹಾಯ ಮಾಡಿ, ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂದು ಗುನುಗುತ್ತಾ, ಕಳೆದೆರಡು ತಿಂಗಳ ಹಿಂದೆ ಅರ್ಧಕ್ಕೆ ಓದಲು ನಿಲ್ಲಿಸಿದ The Epigenetics Revolution ಪುಸ್ತಕವನ್ನು ಕೈಗೆತ್ತಿಕೊಂಡೆ..</p>
<p dir="ltr">ಅಂದು ಸುಮ್ನೆ ತೋಚಿದ್ದು ಹಾಗೆ ಗೀಚಿದ್ದು.....<br>
-Archiees after a long time :)</p>
Anonymoushttp://www.blogger.com/profile/08569784804915074890noreply@blogger.com2tag:blogger.com,1999:blog-5229584388114497227.post-13925797272379439752018-03-17T06:47:00.001-07:002018-03-17T06:47:59.795-07:00ತಪ್ಪುಗಳನ್ನು ಹುಡುಕುವುದರಿಂದ ಸಂತಸವು ಹೆಚ್ಚಾಗುತ್ತದೆ!!<p dir="ltr">ಕೆಲ ಸಲ ನಾವೆಲ್ಲ ಯೋಚಿಸುತ್ತಿರುತ್ತೇವೆ<br>
ಈ ಜಗತ್ತಿನಲ್ಲಿ <a href="http://ತಪ್ಪುಗಳನ್ನು ಹುಡುಕುವುದರಿಂದ ಹೇಗೆ ಸಂತಸವು ಹೆಚ್ಚಾಗುತ್ತದೆ?">ತಪ್ಪುಗಳನ್ನು ಹುಡುಕುವುದರಿಂದ ಹೇಗೆ ಸಂತಸವು ಹೆಚ್ಚಾಗುತ್ತದೆ</a> ಎಂದು??<br>
ಇದನ್ನು ಸ್ಪಷ್ಟಿಕರಿಸಿಕೊಳ್ಳಲು ಈಗ ನಿಮ್ಮ ಪ್ರೀತಿ ಪಾತ್ರರೊಡನೆ ತೀರಾ ಇತ್ತೀಚೆಗೆ ನೀವು ಮುನಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಿ.<br>
ತಪ್ಪು ಎಲ್ಲರಿಂದಲೂ ಆಗುತ್ತವೆ. ತಪ್ಪುಗಳಿಂದಲೇ ತಾನೇ ನಾವು ಪಾಠ ಕಲಿಯುವುದು?!<br>
ಆ ಮುನಿಸಿನ ಸನ್ನಿವೇಶದಲ್ಲಿ ನಿಮ್ಮಿಂದಾದ ತಪ್ಪಾದ ವರ್ತನೆಯನ್ನು ನೀವೇ ಯೋಚಿಸಿ ಹುಡುಕಿ. ಆಗ ನಿಮಗರಿವಾಗುತ್ತದೆ ನೀವೇ ಎನೋ ತಪ್ಪಾಗಿ ಇಲ್ಲವೇ ಒರಟಾಗಿ, ಅಸಂಬದ್ಧವಾಗಿ ಮಾತನಾಡಿರಬಹುದೆಂದು.<br>
ನೀವು ಇದರ ಬಗ್ಗೆ ಯೋಚಿಸಬಲ್ಲರಾದರೆ ತುಂಬಾ ಒಳ್ಳೆಯದು.<br>
ಎಲ್ಲರ ತಲೆಯಲ್ಲಿ ಇಬ್ಬರು ವಕೀಲರಿದ್ದಾರೆ. ಆ ಇಬ್ಬರೂ ವಕೀಲರು ನಮಗಾಗಿ ತಮ್ಮ ವಾದವನ್ನು ಮಂಡಿಸುತ್ತಲೇ ಇರುತ್ತಾರೆ. ಸಮಾಧಾನದಿಂದ ಆ ವಾದವನ್ನು ಕೇಳಿದರೆ ಒಬ್ಬ ವಕೀಲ ನೀವು ಸರಿ ಎಂದು ವಾದ ಮಾಡಿದರೆ ಇನ್ನೊಬ್ಬ ವಕೀಲ ನೀವು ತಪ್ಪೆಂದು ವಾದ ಮಾಡುತ್ತಿರುತ್ತಾನೆ.<br>
ಈಗ ನೀವು ಏರಡನೇ ವಕೀಲನ ವಾದಕ್ಕೆ ಹೆಚ್ಚಿನ ಗಮನ ನೀಡಿ ನಿಮ್ಮಿಂದಾದ ಯಾವುದಾದರೂ ತಪ್ಪನ್ನು ಒಪ್ಪಿಕೊಂಡಾಗ ಆ ಕ್ಷಣದಲ್ಲಿ ನಿಮ್ಮ ಮನಸಿಗೆ ನೋವಾಗಬಹುದು ಆದರೆ ಆ ಎರಡನೇ ವಕೀಲನನ್ನು ಆತನ ವಾದ ಮುಂದುವರೆಸಲು ಬಿಟ್ಟಾಗ ಆತ ನಿಮ್ಮಿಂದಾದ ಎಲ್ಲ ತಪ್ಪುಗಳ ಸತ್ಯಾಂಶಗಳನ್ನು ನಿಮ್ಮ ಮುಂದೆ ಹಾಜರು ಪಡಿಸುತ್ತಾನೆ. ಆಗ ನಿಮಗೆ ನಿಮ್ಮಿಂದಾದ ತಪ್ಪಿನ ಅರಿವಾದಾಗ ಮೊದಲು ನಿಮ್ಮ ಮನಸಿಗೆ ನೋವಾಗುತ್ತದಾದರೂ ನೀವು ನಿಮ್ಮ ಮನಸಿನಾಳದಲ್ಲೆಲ್ಲೋ ನಿಮಗೆ ಗೊತ್ತಿಲ್ಲದೇ ಖುಷಿಯ ಹೆಮ್ಮೆಯ ಭಾವ ಮೂಡುತ್ತದೆ. ಏಕೆಂದರೆ ನಿಮಗೆ ನಿಮ್ಮಿಂದಾದ ನಿಮ್ಮದೇ ವರ್ತನೆಯ ಅರಿವಾಗಿರುತ್ತದೆ.<br>
ವಾವ್ ಎಷ್ಟೊಂದು ಸರಳ ಮತ್ತು ಖುಷಿಯ ವಿಚಾರವಲ್ಲವೇ?<br>
<b>ನಮ್ಮ ತಪ್ಪಿನ ಅರಿವು ನಮಗಾದಾಗ ನಾವು ಅದನ್ನು ಒಪ್ಪಿಕೊಳ್ಳುವುದನ್ನು ಕಲಿತರೆ, ಖುಷಿಯು ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ</b>.<br>
ನಾವೆಲ್ಲ ಇದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮಲ್ಲಿ ಬದಲಾವಣೆಯ ಪರ್ವ ಕಂಡುಬರುತ್ತದೆ..</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEjO2rFB4y2SpGdc5Irnu7PPgYChRFh7NHNOldjDtddOYu1YUy7EuASyUTYMzbotWCOiOfqtpRWEARAJ4DUHPo3nHpgeurVobe_OakMvWU5Mc8Uv0smpd4Y7KZxUQ-fAQ5dKq8XsGlV4btJ0/s1600/images+%252814%2529.jpeg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEjO2rFB4y2SpGdc5Irnu7PPgYChRFh7NHNOldjDtddOYu1YUy7EuASyUTYMzbotWCOiOfqtpRWEARAJ4DUHPo3nHpgeurVobe_OakMvWU5Mc8Uv0smpd4Y7KZxUQ-fAQ5dKq8XsGlV4btJ0/s640/images+%252814%2529.jpeg"> </a> </div>Anonymoushttp://www.blogger.com/profile/08569784804915074890noreply@blogger.com4tag:blogger.com,1999:blog-5229584388114497227.post-91828647566967295212018-03-16T23:05:00.001-07:002018-03-16T23:05:09.353-07:00"ಇಂದು" ಎಂಬ ಸುಂದರ ಸುದಿನ🙂<p dir="ltr">ನಿನ್ನೆಗಳ ಯಾರೂ ಹೊತ್ತು ತರಲು ಸಾಧ್ಯವಿಲ್ಲ, <br>
ನಾಳೆಗಳು ಯಾರಿಗೂ ತಿಳಿದಿಲ್ಲ.. ಆದರೆ "ಇಂದು" ಎಂಬ ಸುಂದರ ಸುದಿನ ನಮ್ಮೊಂದಿಗಿದೆ.<br>
ಈ ಕ್ಷಣ ಎಂಬುದು ಬದುಕಿನ ಸಮಯದ ಬಹು ಮುಖ್ಯ ಮತ್ತು ವಾಸ್ತವಿಕ ಪಾತ್ರ. ಜೀವನದ ಪ್ರತೀ ಕ್ಷಣವನ್ನು ಪ್ರೀತಿಯಿಂದ ಸ್ವಾಗತಿಸಿದರೆ ಬದುಕೇ ಪ್ರೀತಿಯ ಹೊಳೆಯಾಗಿ ಹರಿಯುತ್ತದೆ..❤️</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEgyUIxDbYY7rdQ5t6kpT7it58BdOPLHZDZO0yzV-MaE9awhKwRUrCQTpvzDxezwcCO2Vu1kyZvFh_aCSiivBitpAYjDqVTXcTFmQbnU5vQG9TxlEANmAit99HdE2dcv4azhU3YHqrSQbTvi/s1600/images+%252813%2529.jpeg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEgyUIxDbYY7rdQ5t6kpT7it58BdOPLHZDZO0yzV-MaE9awhKwRUrCQTpvzDxezwcCO2Vu1kyZvFh_aCSiivBitpAYjDqVTXcTFmQbnU5vQG9TxlEANmAit99HdE2dcv4azhU3YHqrSQbTvi/s640/images+%252813%2529.jpeg"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-13805828551221949262017-05-09T21:35:00.001-07:002017-05-09T21:37:37.241-07:00ಗುರುಪೌರ್ಣಮಿ<p dir="ltr">ಗುರುಬ್ರಹ್ಮ ಗುರುರ್ವಿಷ್ಣು<br>
ಗುರುಃದೇವೋ ಮಹೇಶ್ವರಃ<br>
ಗುರುಸಾಕ್ಷಾತ್ ಪರಃ ಬ್ರಹ್ಮ<br>
ತಸ್ಮೈಶ್ರೀ ಗುರವೇ ನಮಃ….</p>
<p dir="ltr">ತಾಯಿ ನಮ್ಮ ಮೊತ್ತ ಮೊದಲ ಗುರು.<br>
ತಂದೆ ಅನಂತರದ ಗುರು.<br>
ಶಾಲಾ ಕಾಲೇಜಿನ ಅಧ್ಯಾಪಕರು ನಂತರದ ಗುರುಗಳು. </p>
<p dir="ltr">ಜೀವನದಲ್ಲಿ ಯಾವುದೇ ಕಡೆಯಿಂದ ಲಭಿಸುವ ಜ್ಞಾನ ಮತ್ತು ಅನುಭವವೂ ಗುರುವಾಗಿದೆ. </p>
<p dir="ltr">ವಿಧಿಯಾಟದಿಂದ ನಮ್ಮನ್ನು ಪರೀಕ್ಷಿಸುವ ಸರ್ವಶಕ್ತ ಮತ್ತು ಅವನಿಂದ ಲಭಿಸುವ ಪಾಠವೂ ಗುರುವೇ ಆಗಿದೆ.</p>
<p dir="ltr">ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ನಡೆಸುವ ವಿವೇಕ, ಜ್ಞಾನ ಮತ್ತು ಶಕ್ತಿಯ ಸಂಯುಕ್ತ ಸಂಕೇತವೇ "ಗುರು" </p>
<p dir="ltr">ನಮ್ಮಲ್ಲಿನ ಅಜ್ಞಾನವನ್ನು ತೊಲಗಿಸಿ ಜ್ಞಾನದೀಪವನ್ನು ಯಾರು ಬೆಳಗಿಸುವರೋ ಅವರೇ ನಿಜವಾದ ಗುರುಗಳು..</p>
<p dir="ltr">ಬದುಕೆಂಬ ಪಾಠಶಾಲೆಗೆ, ಬದುಕಿನ ಪಾಠ ಕಲಿಸಿದ ಎಲ್ಲಾ ಗುರುಗಳಿಗೆ ಭಕ್ತಿಪೂರ್ವಕ ನಮನ.🙏</p>
<p dir="ltr">🌸ಎಲ್ಲರಿಗೂ ಒಳಿತಾಗಲಿ..ಎಲ್ಲರಿಗೂ ಶುಭವಾಗಲಿ..🙏</p>
<p dir="ltr"><u>ಗುರುಪೌರ್ಣಮಿಯ ಶುಭಾಶಯಗಳು✨</u><a href="https://blogger.googleusercontent.com/img/b/R29vZ2xl/AVvXsEjkqysPAw72irzV7R3pvhhbVAcJfJl3cZYCfID-Eu_z7S46uOGXFNLDDMwBcrryWG2M73xph9FN7YL1yI3kb8HEe9teYld0He3CJAD2lZy3XshrKVFSDJeROvcUqxtvkXSJvxQdB2GEMjnE/s1600/effect_1494390785120.jpg" imageanchor="1" style="text-align: center; margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEjkqysPAw72irzV7R3pvhhbVAcJfJl3cZYCfID-Eu_z7S46uOGXFNLDDMwBcrryWG2M73xph9FN7YL1yI3kb8HEe9teYld0He3CJAD2lZy3XshrKVFSDJeROvcUqxtvkXSJvxQdB2GEMjnE/s640/effect_1494390785120.jpg"></a></p>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-89157594994172735652017-03-20T05:45:00.001-07:002017-05-07T05:39:26.050-07:00ಒಂದು ಸುಂದರ ಸಂಜೆ<p dir="ltr"> ನಾವು ಎಷ್ಟೇ ಕಲಿತು graduates, post graduates, doctorates, many more ಆಗಿದ್ರೂ, ಪ್ರಕೃತಿ, ಸೂರ್ಯ, ಚಂದ್ರ, ಚುಕ್ಕಿ, ತಾರೆ, ನಭೋಮಂಡಲ ಮುಂತಾದವುಗಳ ಕುರಿತು ಸಾಕಷ್ಟು ಮಾಹಿತಿ ದೊರೆತಿದ್ದರೂ, ಸೂರ್ಯ-ಚಂದ್ರ ಇದ್ದಲ್ಲೇ ಇರ್ತಾರೆ, ಭೂಮಿ ತಿರುಗುತ್ತದೆ, day and night occurs due to the rotation of earth on its axis..ಅನ್ನೋ fact ಗೊತ್ತಿದ್ರೂ ಅದೇಕೋ ಏನೋ ಗೊತ್ತಿಲ್ಲ ನನಗೆ sunrise sunset ನೋಡಿದಾಗಲೆಲ್ಲ ಮತ್ತು shifts ಮೇಲೆ work ಮಾಡೋ techies ನೋಡಿದಾಗಲೆಲ್ಲ "ನನ್ನ ಅಮ್ಮ" ನೆನಪಾಗ್ತಾಳೆ. .<br>
ಚಿಕ್ಕಂದಿನಲ್ಲಿ ಅಮ್ಮ ನನಗೆ ಊಟ ಮಾಡಿಸ್ತಿರೋವಾಗ ಅಮ್ಮ ಸೂರ್ಯ ಸಂಜೆಯಾದ ಮೇಲೆ ಎಲ್ಲಿ ಹೋಗ್ತಾನೆ ಅಂತ ಕೇಳಿದಾಗ, ಸೂರ್ಯ-ಚಂದ್ರ ಭೂಮಿ ತಾಯಿಯ ಎರಡು ಮಕ್ಕಳು..ಸಂಜೆಯಾದ ಮೇಲೆ ಸೂರ್ಯ ಅಮ್ಮನ ಹತ್ತಿರ ಹೋಗ್ತಾನೆ ಊಟ ಮಾಡಿ rest ಮಾಡಿ ಬೆಳಿಗ್ಗೆ ಬರ್ತಾನೆ ಅಲ್ಲಿವರೆಗೂ ಚಂದ್ರ ಭೂಮಿ ಕಾಯ್ತಾನೆ. .ಮತ್ತೇ ಬೆಳಿಗ್ಗೆ ಸೂರ್ಯನ ಪಾಳಿ. . ಅಮ್ಮ ಹೇಳಿದ ಆ ಕತೆ ಎಷ್ಟೊಂದು ಸುಂದರ. . ಸೂರ್ಯಾಸ್ತ-ಸೂರ್ಯೋದಯ ನೋಡೋದಂದ್ರೆ ನಂಗೆ ಪಂಚಪ್ರಾಣ, ತುಂಬಾ ಖುಷಿ.. ಆ ವೇಳೆ ಬಾನಲ್ಲಿ ಮೂಡಿದ ಚಿತ್ತಾರ ನೋಡಿದಾಗಲೆಲ್ಲ ಅಮ್ಮ ಮತ್ತು ಅಮ್ಮ ಹೇಳಿದ ಆ ಕತೆ ನನ್ನೆದೆಲಿ ಬೆಚ್ಚನೆಯ ಅನುಭವ ನೀಡುತ್ತದೆ. . <br>
love u lots ಅಮ್ಮ</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEg5Q0CSsW23SRPftdxBEgwS2AcDgd7DrTLQnJ2qbE_1xWSv8Y2pb5ffjcRYDaLRNBG10bLeR1-iW7THxOmUWmFMIdT_gUQvLImnHVzQYdFgpbBcs_Q0a_eD6i4qPS_1V7JsGiDbPPQ-hF93/s1600/PicsArt_1408426938022.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEg5Q0CSsW23SRPftdxBEgwS2AcDgd7DrTLQnJ2qbE_1xWSv8Y2pb5ffjcRYDaLRNBG10bLeR1-iW7THxOmUWmFMIdT_gUQvLImnHVzQYdFgpbBcs_Q0a_eD6i4qPS_1V7JsGiDbPPQ-hF93/s640/PicsArt_1408426938022.jpg"> </a> </div>Anonymoushttp://www.blogger.com/profile/08569784804915074890noreply@blogger.com3tag:blogger.com,1999:blog-5229584388114497227.post-57505405756220686422017-03-05T05:59:00.001-08:002017-03-05T05:59:42.316-08:00ಹೀಗೂ ಉಂಟೇ??!!<p dir="ltr">ಜೀವನದಲ್ಲಿ ಒಂದು ರೋಚಕ ಅನುಭವ,ಒಂದೆಡೆ ಯೋಚನೆ/ಆಲೋಚನೆ /ಆತಂಕ, ಮತ್ತೊಂದೆಡೆ ಜೀವನದಲ್ಲಿ ಮಹತ್ತರ ಏನೋ ಸಾಧನೆ ಮಾಡಿದ ಖುಷಿ/ಹೇಳಲಾಗದ/ಮರೆಯಲಾಗದ ಅದ್ಭುತ ಅನುಭವ! ಅನುಭವಿಸಿದವರಿಗೇ ಗೊತ್ತು.....!<br>
  ನಾನು ಇಂದು ಸುಮ್ಮನೆ ನನ್ನ ರೂಮಿನ ಪಕ್ಕದಲ್ಲಿ ಕುಳಿತು, ಅನತಿ ದೂರದಲ್ಲಿ ಕಾಣುವ ಬೆಟ್ಟವನ್ನು ನೋಡುತ್ತಾ ಕೆಲಸಕ್ಕೆ ಬಾರದ ಆಲೋಚನೆಗಳನ್ನು ಮಾಡುತ್ತಿದ್ದೆ, ಸುಮ್ಮನೆ ಎಲ್ಲಿಂದಲೋ ಹಾರಿ ಬಂತೊಂದು ಹಕ್ಕಿ, ಹಕ್ಕಿ ಹಾರಿ ಬಂದು ನನ್ನ ಎದುರಲ್ಲಿ ಕುಳಿತದ್ದಕ್ಕಾಗಿ ಮಾತ್ರ ಆ ಹಕ್ಕಿಯ ಇರುವಿಕೆ ನನಗೆ ತಿಳಿಯಿತಲ್ಲವೇ??! ಹಾಗಾದರೆ ಪ್ರಪಂಚದ ಅಷ್ಟು ಹಕ್ಕಿಗಳು ನನಗೆ ಕಾಣಲು ಸಾದ್ಯವೇ?? ಖಂಡಿತ ಸಾದ್ಯವಿಲ್ಲ! ಅಂದ ಮಾತ್ರಕ್ಕೆ ಆ ಹಕ್ಕಿಗಳೇ ಇಲ್ಲ ಎನ್ನುವುದು ತಪ್ಪಲ್ಲವೆ??!<br>
ಇದೇ ತರ್ಕವನ್ನು ಕಾಲೇಜಿನ ಪರೀಕ್ಷೆಗೆ ಹೋಲಿಸಿ ನೋಡಿದರೆ, ನಾನು ಬರೆದಷ್ಟು ಮಾತ್ರ, ಕರೆಕ್ಷನ್ ಮಾಡುವವರಿಗೆ ಕಾಣಿಸುತ್ತದೆ! ಹಾಗಾದರೆ ಬರೆಯದೆ ಇರುವುದು ನನಗೆ ಗೊತ್ತಿಲ್ಲ ಎಂದು ಅರ್ಥವೇ?!<br>
ಬಹುಷಃ ಗೊತ್ತಿದ್ದರು ನೆನಪಿಲ್ಲದಿರಬಹುದು ಅಲ್ಲವೇ?! ಇದೆಲ್ಲ ಬರಿಯ ಆಲೋಚನೆಗಳು ಅಷ್ಟೇ, ಎಷ್ಟೋ ಬಾರಿ ನಾವು ಬೇರೆಯವರ ಮೌನವನ್ನು ನೋಡಿ ಅವರಿಗೆ ಏನು ಗೊತ್ತಿಲ್ಲ ಎಂದು ತಿಳಿದು ಸುಮ್ಮನಾಗಿರುತ್ತೇವೆ, ಆದರೆ ಗೊತ್ತಿರುವವರೆಲ್ಲರು ಪ್ರಚುರ ಪಡಿಸಬೇಕೆಂದೇನು ಇಲ್ಲ, ಬರೆದವನು ಮಾತ್ರ ಕವಿ ಅಲ್ಲ, ಎಷ್ಟೋ ಬಾರಿ ಬರೆಯದೆ ಸುಮ್ಮನೆ ಕುಳಿತವನು ಕೂಡ ಕವಿಯೇ, ಈ ರೀತಿಯ ಆಲೋಚನೆಗಳು ತಲೆಯಲ್ಲಿ ಓಡಾಡುತ್ತಲೇ ಇತ್ತು, ಆದರೆ ಪರ್ವತ ಮಾತ್ರ ಹಾಗೆ ನಿಂತಿತ್ತು, ಅದನ್ನು ನಾವು ಪರ್ವತ ಎಂದು ಯಾಕೆ ಕರೆಯಬೇಕು ನದಿ ಎಂದು ಕರೆದರೆ ತಪ್ಪೇ?? ಎಂತಾ ಹುಚ್ಚು ಪ್ರಶ್ನೆ ಅಲ್ಲವೇ?! ಪ್ರಪಂಚದ ಎಲ್ಲಾ ಜಡ,ಜೀವಂತ ವಸ್ತುಗಳನ್ನು ನಾವು ಭಾಷೆ ಹಾಗೂ ಅಕ್ಷರಗಳಲ್ಲಿ ಕಟ್ಟಿ ಹಾಕಿದ್ದೇವೆಲ್ಲ? ಪರ್ವತವನ್ನು ನದಿ ಎಂದು ಕರೆದ ಮಾತ್ರಕ್ಕೆ ಅದು ನೀರಾಗಿ ಹರಿದು ಬಿಡುವುದೇ? ಅಥವಾ ನದಿಯನ್ನು ಪರ್ವತ ಎಂದರೆ ಅದು ಜಡವಾಗಿ, ಎತ್ತರವಾಗಿ ನಿಂತು ಬಿಡುವುದೇ?! ನಾಳೆಯಿಂದಾ ಹುಟ್ಟುವ ಮಕ್ಕಳಿಗೆಲ್ಲ ನಾಯಿಯನ್ನು ತೋರಿಸಿ ಸಿಂಹ ಎಂದು ಹೇಳಿಕೊಡೋಣ ಎಂದು ಪ್ರಪಂಚದಾದ್ಯಂತ ಒಂದು ಕರಾರು ಮಾಡಿ ಬಿಡೋಣಾ, ಆಗ ಆ ಮಕ್ಕಳು ನಾಯಿಯನ್ನೇ ಸಿಂಹ ಎಂಬ ಭಾವನೆಯೊಂದಿಗೆ ಕರೆಯಲಾರಂಭಿಸುತ್ತವೆ, ಅಂದ ಮಾತ್ರಕ್ಕೆ ನಾಯಿ ಸಿಂಹವಾಗಿ ಬದಲಾಗುವುದೇ?! ಸಿಂಹ ನಾಯಿಯಾಗಿ ಮನೆಯ ಎದುರಿಗೆ ರೊಟ್ಟಿ ತಿನ್ನಲು ಕಾಯುತ್ತಾ ಕೂರುವುದೇ?!<br>
   ಈ ಹುಚ್ಚು ಆಲೋಚನೆಗಳಲ್ಲೇ ನನಗೆ ತೋರಿದ ಪ್ರಶ್ನೆ ನಾನು ಯಾರು? ಹೌದು ನಾನು ಯಾರು??! ನನ್ನ ಹೆಸರಿನಿಂದ ನನ್ನನ್ನು ಗುರುತಿಸಬಹುದು, ಆದರೆ ಆ ಹೆಸರನ್ನು ಬದಲು ಮಾಡಿದರು ನಾನು ನಾನೇ ಅಲ್ಲವೇ?! ಹೆಸರನ್ನು ನಾಲ್ಕು ಜನರ ಸಮ್ಮುಖದಲ್ಲಿ ಖುಷಿಯಾಗಿ ನನ್ನನ್ನು ಗುರುತಿಸಲು ಮಾಡಿಕೊಂಡ ಒಪ್ಪಂದ ಮಾತ್ರವೇ ಹೊರತು ಅದರಲ್ಲಿ ನಾನಂತು ಇಲ್ಲ ಎನ್ನುವುದನ್ನು ನೀವೆಲ್ಲ ಒಪ್ಪುತ್ತೀರಿ ಅಲ್ಲವೇ??!!ನನ್ನ ಹೆಸರಿನ ಅನೇಕ ಜನರಿದ್ದಾರೆ ಹಾಗಾದರೆ ಅವರೆಲ್ಲಾ ನಾನೇನ??<br>
ನನ್ನ ದೇಹಕ್ಕೊಂದು ಆಕಾರವಿದೆ, ಎತ್ತರವಿದೆ, ತೂಕವಿದೆ, ಬಣ್ಣವಿದೆ, ಚಲನೆ ಇದೆ, ಹಾಗೆಂದುಕೊಂಡು, ಆ ದೇಹ ನಾನೇನಾ?? ನಾನು ಹುಟ್ಟಿದಾಗ ಕುಬ್ಜವಾಗಿದ್ದ ದೇಹ ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಲೇ ಇದೆ, ಹಾಗಾದರೆ ನಾನ್ಯಾರು? ನನ್ನ ದೇಹಕ್ಕೆ ರಕ್ತ ಕೊಟ್ಟು, ಉಸಿರು ಕೊಟ್ಟು ಕಾಪಾಡಲು ಹೃದಯವಿದೆ, ಅಂದ ಮಾತ್ರಕ್ಕೆ ನಾನು ಬರಿ ಹೃದಯನಾ? ಹೃದಯದಿಂದ ರಕ್ತ ಹೀರಿ ಜೀವಂತ ಆಗಿರುವ ನನ್ನ ತಲೆಯಲ್ಲಿ ಒಂದು ಮೆದುಳಿದೆ, ಆ ಮೆದುಳು ನಾನೇನಾ? ಇಲ್ಲಿ ಜೀವಂತ ಎನ್ನುವ ಪದವೇ ಒಂದು ಒಗಟು, ಹಾಗಾದರೆ ನಿಜವಾಗಿಯೂ ನಾನ್ಯಾರು, ಇಲ್ಲಿ ಇನ್ನೊದು ಪ್ರಶ್ನೆ, ಈ “ನಿಜ” ಎನ್ನುವುದು, ನನಗೆ ನಿಜವಾಗಿರುವುದೋ? ಅಥವಾ ನನ್ನ ಸುತ್ತಮುತ್ತಲಿನ ನನ್ನ ಹಾಗೆಯೇ ಚಲನೆ ಇರುವವರಿಗೋ? ಅಥವಾ ಇನ್ನ್ಯಾರೋ ಕಣ್ಣಿಗೆ ಕಾಣದವರಿಗೋ? ಚಿಕ್ಕಂದಿನಿಂದಲೂ ನನಗ್ಯಾಕೋ ಎಲ್ಲವು ಅಜಲು ಗೊಜಲು, ಒಮ್ಮೆ ಪರೀಕ್ಷೆಯಲ್ಲಿ ನೂರಕ್ಕೆ ೯೦ ಅಂಕ ತೆಗೆದುಕೊಂಡರೆ ಬೆನ್ನು ತಟ್ಟುವ ಜನ, ಅದೇ ಮುಂದಿನ ಪರೀಕ್ಷೆಯಲ್ಲೂ ೯೦ ಕೊಂಡೆ, ಆಗ ಅದೇ ಜನ ನನ್ನನ್ನು ಕಡೆಗಾಣಿಸಿದರು, ಕಾರಣವೇನು, ಇನ್ನೊಂದು ಚಲನೆಯುಳ್ಳ ದೇಹ ೯೮ ಅಂಕ ಪಡೆದುಕೊಂಡಿತ್ತು!!!!<br>
ಇಲ್ಲಿ ನನ್ನ ಅಂಕಗಳು ಸ್ಥಿರವಾಗಿದ್ದರು, ಅದನ್ನು ನೋಡುವವರ ಮನಸ್ಥಿತಿ ಬದಲಾಗಿ ಹೋಯ್ತು! ಹಾಗೆಂದು ನಾನೂ ಅವರನ್ನು ಒಲಿಸಲು ಪ್ರಯತ್ನಿಸುವುದು ನಿಜವಾದ ನಾನೇ?!!<br>
   ಈ ಮನಸ್ಸು ಅಥವಾ ಮನಸ್ಥಿತಿಯನ್ನು ನಾನು ಎನ್ನೋಣ ಎಂದರೆ, ಅದು ಯಾವಾಗಲು ಬದಲಾಗುತ್ತಲೇ ಇದೆ, ಇಂದು ಕಂಡ ವಿಸ್ಮಯಗಳು ನಾಳೆ ಸಾಮಾನ್ಯ ವಿಷಯವಾಗಿರುತ್ತದೆ, ನಿನ್ನೆ ಕಂಡ ಕನಸುಗಳು ಇಂದು ಮರೆತೇ ಹೋಗಿರುತ್ತವೆ, ಕೊನೆ ಪಕ್ಷ, ಈ ದೇಹ, ಮನಸು, ಹೆಸರು, ಉಸಿರು ಎಲ್ಲವನ್ನು ಕೂಡಿಸಿ ನಾನು ಎನ್ನೋಣ ಎಂದರೆ, ಒಂದು ಇಲ್ಲದೆ ಇನ್ನೊಂದಕ್ಕೆ ಅರ್ಥವೇ ಇಲ್ಲದ ಪರಿಸ್ಥಿತಿ, ಮೊನ್ನೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಕಲೆಕ್ಟರ್ ಎಂದು ಎಲ್ಲರಿಂದ ಕರೆಸಿಕೊಳ್ಳುವ ಜೀವ ಬಂದು, ನಿಮ್ಮ ಐಡಿ ಕಾರ್ಡ್ ಕೊಡಿ ಎಂದು ಕೇಳಿತು, ಎದುರಿಗೆ ಇದ್ದ ನನ್ನ ದೇಹ, ಮನಸು,ಹೆಸರು ಉಸಿರು ಯಾವುದಕ್ಕೂ ಬೆಲೆಯೇ ಇಲ್ಲದಂತೆ ಆ ಜೀವ ನನ್ನ ದೇಹದಲ್ಲಿರುವ ಮುಖದ ಕಡೆಗೂ ನೋಡದೆ, ಐಡಿ ಕಾರ್ಡ್ ನೋಡಿ ಸುಮ್ಮನೆ ಹೋಯಿತು!!ಹಾಗಾದರೆ ಐಡಿ ಕಾರ್ಡೇ ನಾನು ಎನ್ನೋಣವೆಂದರೆ,ಆ ಕಾರ್ಡ್ ಇಲ್ಲದೆಯೂ ನನ್ನ ದೇಹ ಚಲಿಸಲು ಶಕ್ತಿ ಹೊಂದಿತ್ತು, ಇಲ್ಲಿ ನಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ, ನನ್ನವರು ಯಾರು ಎನ್ನುವ ಪ್ರಶ್ನೆ ಏಳುತ್ತದೆ, ಅದಕ್ಕೂ ಉತ್ತರ ಸಿಕ್ಕರೆ ನನ್ನದು ಎಂಬ ವಸ್ತು ಇಲ್ಲಿ ಏನಿದೆ ಎಂಬಾ ಪ್ರಶ್ನೆ ಏಳುತ್ತದೆ, ಸುಮ್ಮನೆ ನನ್ನ ತಂದೆ ತಾಯಿಯನ್ನು ನನ್ನವರು ಎಂದುಕೊಳ್ಳೋಣ ಎಂದರೆ, ಈ ದೇಹದ ಬದಲು ಬೇರೆ ಒಂದು ದೇಹ-ಮನಸ್ಸು ಅವರ ಗರ್ಭದಲ್ಲಿ ಜನಿಸಿದ್ದಿದ್ದರೆ, ನನ್ನ ದೇಹಕ್ಕಿದ್ದ ಹೆಸರು ಆ ದೇಹಕ್ಕೆ ಇರುತ್ತಿತ್ತು, ಆಗ ಅವರು ಆ ದೇಹದ ತಂದೆ ತಾಯಿಗಳಾಗಿರುತ್ತಿದ್ದರು, ಆಗ ನಾನು ಎಂದು ಎಲ್ಲರಿಂದ ಗುರುತಿಸಿಕೊಳ್ಳುವ ದೇಹ-ಮನಸೂ ಏನು ಇರುತ್ತಿರಲಿಲ್ಲ!!ನನ್ನ ದೇಹ-ಮನಸು ಇಲ್ಲ ಎಂದ ಮಾತ್ರಕ್ಕೆ ನಾನು ಇಲ್ಲವೇ ಇಲ್ಲ ಎಂದು ಅರ್ಥವೇ?!!<br>
   ಇಲ್ಲಿಯೇ ಇನ್ನೊಂದು ವಿಚಾರ, ದೇಹ ಒಂದು ಶಕ್ತಿ, ಕೆಲವೊಮ್ಮೆ ಒಪ್ಪಲಾಗುವುದಿಲ್ಲ, ಯಾಕೆಂದರೆ ಮನಸ್ಸು ಎನ್ನುವುದು ಇಲ್ಲದೆ ದೇಹಕ್ಕೆ ಬೆಲೆ ಇಲ್ಲ! ಸರಿ, ದೇಹ-ಮನಸು ಎರಡು ಶಕ್ತಿಯ ರೂಪಗಳು, ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತೆಗೆದುಕೊಂಡು ಹೋಗುವಾಗ ಸಂಪೂರ್ಣ ರೂಪಾಂತರ ಅಸಾಧ್ಯ, ಸ್ವಲ್ಪ ಮಟ್ಟದ ಶಕ್ತಿ ಬೇರೆ ಬೇರೆ ರೂಪದಲ್ಲಿ ವ್ಯಯವಾಗಿ ಹೋಗುತ್ತದೆ, ಅದನ್ನು ವಿಜ್ಞಾನ ಸಾಬೀತುಪಡಿಸಿದೆ, ಹಾಗಾದರೆ, ಎಷ್ಟೋ ವರ್ಷಗಳಿಂದ ರೂಪಾಂತರ ಹೊಂದಿ ಹೊಂದಿ ಬರುತ್ತಿರುವ ನಮ್ಮ ದೇಹ-ಮನಸಿನ ಶಕ್ತಿ ಕೂಡ ಒಂದು ದಿನ ನಶಿಸಿ ಹೋಗಿ ಬಿಡಬಹುದಲ್ಲಾ, ಆಗ ಬೇರೆ ರೂಪದಲ್ಲಿ ವ್ಯಯವಾದ ಶಕ್ತಿ ಏನಾಗಿರುತ್ತದೆ ?? ಅಥವಾ ಇಲ್ಲಿ ವಿಜ್ಞಾನ ಎನ್ನುವ ಪದ ಎಲ್ಲವನ್ನು ಸಾಬಿತು ಮಾಡುವ ವರೆಗೂ ಇದ್ದ ಎಲ್ಲ ಶಕ್ತಿಯ ರೂಪಗಳು, ನೈಸರ್ಗಿಕ ಕ್ರಿಯೆಗಳು, ಇದ್ದೆ ಇರಲಿಲ್ಲ ಎನ್ನಲಾಗುತ್ತದೆಯೇ?<br>
    ಭಾಷೆಯ ರೂಪದಲ್ಲಿ, ಅಥವಾ ಭಾಷೆಯ ಮೂಲಕ ಹುಟ್ಟಿದ ದೇಹ ಸುತ್ತಲಿನ ಪ್ರಕೃತಿಯೊಂದಿಗೆ ಒಡನಾಟ ಹೊಂದುತ್ತದೆ ಸತ್ಯವೇ??? ಹಾಗಾದರೆ ಯಾವುದೇ ಬಾಷೆ ಅರಿಯದ ಚಿಕ್ಕ ಮಗುವಿನ ಬಾಯಿಗೆ ಸಕ್ಕರೆ ಹಾಕಿದರೆ ಸುಮ್ಮನೆ ಚೀಪುತ್ತದೆ!! ಅದೇ ಬೇವಿನ ಎಲೆಯನ್ನೋ, ಹಾಗಲಕಾಯಿಯನ್ನೊ ಹಾಕಿದರೆ ಕಿಟಾರನೆ ಕಿರುಚಿ ಬಿಡುತ್ತದೆ!! ನಿಜವಾದ ಇಂದ್ರಿಯ ಚರ್ಮ ಮಾತ್ರ, (ನಾಲಿಗೆಯ ಚರ್ಮ ಕೂಡ ಸೇರಿಸಿಕೊಂಡು) ಎಂದು ಹೇಳಲು ಬರುತ್ತದೆಯೇ?  ಈ ದೇಹ ಹಾಗು ಮನಸ್ಸು?? ಈ ಭೂಮಿಯೆಂಬ ಹೆಸರಿನ ಗೋಲದ ಮೇಲೆ ಎಲ್ಲಿಂದ ಬಂತು, ಎಲ್ಲವು ಪ್ರಶ್ನೆಗಳೇ??<br>
ನಾನು ಬದುಕಿದ್ದರೆ ನನಗೆ ಸಾವಿಲ್ಲ??! ಸಾವಿದ್ದರೆ ಬದುಕು ಬೇಕಂತಲೇ ಇಲ್ಲ!! ದಿನಗಳ ಎಣಿಕೆ! ಬಾಲ್ಯದ ಕನಸು! ಯವ್ವನದ ನೆನಪು!ವೃದ್ದಾಪ್ಯದ ಮೆಲುಕು!ಆಮೇಲೇನು ? ಪ್ರಶ್ನೆಗಳು ಹಾಗೆ ಅಲ್ಲವೇ?? ಕಾಡುತ್ತಲೇ ಇರುತ್ತವೆ!!<br>
ಸಂಜೆ ಆಯಿತು, ಹೊಟ್ಟೆ ತಾಳ ಹಾಕುತಿತ್ತು, ಕುಳಿತಲ್ಲಿಂದ ಎದ್ದು ಬಂದೆ!! <br>
(ಸುಮ್ಮನೆ ತಮಾಷೆಗೆ– ಇಷ್ಟೆಲ್ಲಾ ಆದಮೇಲು ನಮಗೆ ಕಾಡುವ ಪ್ರಶ್ನೆ “ಹೀಗೂ ಉಂಟೇ”?!!ಹ್ಹ ಹ್ಹ )</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEiR96JjcvqtN_AGeGHCtKyx02EY1HXEgdb7xz-bQSdAFUpErb_CEvqRn-ycpH4y-cMgXcASf4cVUlIlL1nM6vGVGibWZKPvHNA0oc91KenHfbTgEvI8WV0iipBMiGzvKbJEd8V20eW2heaY/s1600/PicsArt_1408432513786.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEiR96JjcvqtN_AGeGHCtKyx02EY1HXEgdb7xz-bQSdAFUpErb_CEvqRn-ycpH4y-cMgXcASf4cVUlIlL1nM6vGVGibWZKPvHNA0oc91KenHfbTgEvI8WV0iipBMiGzvKbJEd8V20eW2heaY/s640/PicsArt_1408432513786.jpg"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-58821287711948603342017-02-25T10:03:00.001-08:002017-02-26T01:40:57.261-08:00ಕಿಟಕಿಯಾಚೆ..<p dir="ltr"> ಎದುರುಗಡೆ ಟೇಬಲ್ ಮೇಲೆ DELL ಲ್ಯಾಪ್ ಟಾಪ್ ಅಗಲವಾಗಿ ಬಾಯಿ ತೆರೆದು ಕುಳಿತಿತ್ತು. ೩೨.೫*೧೯.೫" ಸ್ಕ್ರೀನ್ ನಲ್ಲಿ ಯಾವುದೋ ತೆಲುಗು ಸಾಂಗ್ ಪ್ಲೇ ಅಗ್ತಾ ಇತ್ತು. ಆದರೆ ಅವಳ ದೃಷ್ಟಿ ಕಿಟಕಿಯಿಂದ ಕಾಣುತ್ತಿರುವ ಹೊರಪ್ರಪಂಚದ ಮೇಲಿತ್ತು. ಗಮನವೆಲ್ಲಾ ವಾಹನಗಳ ಓಡಾಟದ ಭರಾಟೆಯಿಂದ ಉಂಟಾಗುತ್ತಿದ್ದ ಕರ್ಕಶ ಶಬ್ದಗಳ ಮೇಲೆ. ತನ್ನ ಮನಸು ಕೂಡ ಕಳೆದ ಹಲವು ತಿಂಗಳುಗಳಿಂದ ಇದೇ ರೀತಿ ಅಶಾಂತತೆಯಿಂದ ತುಂಬಿಹೋಗಿದೆ. ಮನದ ಹೆದ್ದಾರಿಯಲ್ಲಿ ಯಾವಾಗ ನೋಡಿದರೂ ಟ್ರಾಫಿಕ್ ಜಾಮ್. ಒಂದಲ್ಲ ಒಂದು ವಾಹನದಿಂದಾಗಿ ಪ್ರತಿದಿನವೂ ಕರ್ಕಶ ಸೌಂಡುಗಳು ತಪ್ಪಿದ್ದಲ್ಲ. "ಹೇ ದೇವಾ, ಈ ಟ್ರಾಫಿಕ್ ಜಾಮ್ನಿಂದ ನನ್ನ ಮನಸನ್ನು ಹೇಗೆ ಮುಕ್ತಗೊಳಿಸಲಿ?"! ದೊಡ್ಡದಾಗಿ ಒಮ್ಮೆ ನಿಟ್ಟುಸಿರು ಬಿಟ್ಟಳು.<br>
ಅವಳಿಗೆ ಯಾವತ್ತೂ ಬಗೆಹರಿಯದ ಸಂಗತಿ ಒಂದಿದೆ. ‘ನಮ್ಮ ಜೀವನ ನಮ್ಮ ಕೈಯ್ಯಲ್ಲಿ’, ‘Life is what you make it’, ‘ನಾವೇ ನಮ್ಮ ಜೀವನವೆಂಬ ನಾಟಕದ ಸೂತ್ರಧಾರರು’ - ಇಂತಹ ಡೈಲಾಗ್ಸ್ ಗಳನ್ನು ಹೇಳುತ್ತಲೂ ಕೂಡ ನಾವೇಕೆ ಸಂಪೂರ್ಣವಾಗಿ ನಮ್ಮದು ಎನ್ನುವ ಏಕ ಮಾತ್ರ ಆಸ್ತಿಯಾದ 'Life'ನ್ನು ವ್ಯಾಖ್ಯಾನಿಸುವ ಹಕ್ಕನ್ನು ಇನ್ನೊಬ್ಬರಿಗೆ ಬಿಟ್ಟುಕೊಡುತ್ತೇವೆ? ತಿಳಿದೂ ಸಹ ಮಾಡುವ ತಪ್ಪು ಇದೇ ಅಲ್ಲವೇ? ...ಈ ಸಮಯದಲ್ಲಿ ಮೆದುಳು ಎನ್ನುವ ಬುದ್ಧಿಜೀವಿ ಏನು ಮಾಡುತ್ತಿರುತ್ತದೆ...? ನಮ್ಮ ಜೀವನದ remote controller ನು ನಿಯಂತ್ರಿಸಲು ನಾವೇನು ಬೇರೆಯವರಿಗೆ ಕೊಟ್ಟಿದ್ದೇವಾ???? <br>
FB ಓಪನ್ ಮಾಡಿ ಕೂತಾಗಲೆಲ್ಲಾ ಅವಳಿಗೆ ಒಂದು ವಿಷಯ ಮತ್ತೆ ಮತ್ತೆ ನೆನಪಾಗುತ್ತದೆ. ವ್ಯಕ್ತಿಯೊಬ್ಬ ಎಷ್ಟರ ಮಟ್ಟಿಗೆ ಸೋಷಿಯಲ್ ನೆಟ್ ವರ್ಕ್ ಮೇಲೆ ಡಿಪೆಂಡ್ ಆಗಿದ್ದಾನೆಂ(ಳೆಂ)ದರೆ ಎದುರಿಗೆ ಸಿಕ್ಕಿದಾಗ ಅಥವಾ ಕಾಲ್ ಮಾಡಿದಾಗ ಮಾತನಾಡಲು ಸಮಯವಿರುವುದಿಲ್ಲ. ಅದೇ FBಲಿ ಚಾಟ್ ಮಾಡಲು ಅವನಿ(ಳಿ)ಗೆ ಬೇಜಾನ್ ಪುರಸೊತ್ತಿರುತ್ತದೆ. ಜೀವಂತಿಕೆಗಿಂತ ನಿರ್ಜೀವತೆಯತ್ತಲೇ ಮೋಹ ಜಾಸ್ತಿಯಾಗುತ್ತಿದೆ. ಇದನ್ನು ಅವರಿಗೆ ಅರ್ಥ ಮಾಡಿಸುವುದಾದರೂ ಹೇಗೆ? ಯಾಕೆಂದರೆ ಆಮೇಲೆ ಒಂದು ಅಲ್ಟಿಮೇಟ್ ಸ್ಟೇಟ್ಮೆಂಟ್ ನೀಡಬಾರದಲ್ಲ... ‘ನಿನಗೆ ಜಗತ್ತಿನಲ್ಲಿ ಯಾರೂ ಸರಿಯಾಗಿ ಕಾಣಿಸಲ್ಲ’..!<br>
ನಿಜ, ಜಗತ್ತಿನಲ್ಲಿ ಯಾರೂ ಸರಿಯಲ್ಲ. Nobody/Nothing is perfect. ಈ ನಮ್ಮ ಭೂಮಿಯೇ ಪೂರ್ತಿ ದುಂಡಗಿಲ್ಲ. ಮೇಲ್ಭಾಗದಲ್ಲಿ ಚಪ್ಪಟೆಯಾಗಿದ್ದು ನಡುವೆ ಉಬ್ಬಿದೆ. ಅದೇ ರೀತಿ ಮನುಷ್ಯ ಕೂಡ. ಕೆಲವೊಂದು ಗುಣಗಳು ಚಪ್ಪಟೆಯಾಗಿ ಸೊರಗಿಹೋಗಿದ್ದರೆ, ಇನ್ನು ಕೆಲವು ದೃಢವಾಗಿ ಉಬ್ಬಿಕೊಂಡಿರುತ್ತವೆ. ಇದರ ಅರಿವು ಪ್ರತಿ ಮನುಷ್ಯನಿಗೂ ಇರುತ್ತದೆ. ಆದರೆ ಬೇರೆಯವರು ಹೇಳಿದಾಗ ಮಾತ್ರ ಅರಿವೆಂಬ ಕಿಡಿ ಆರಿಹೋಗಿ ಅವಿವೇಕದ ಬೂದಿ ಆವರಿಸುತ್ತದೆ.<br>
ಅಲಾರಂ ಗಡಿಯಾರ ಬಾರಿಸಿತು. ಅವಳು ಕಿಟಕಿಯಿಂದ ಇತ್ತ ದೃಷ್ಟಿ ಹರಿಸಿದಳು. ಥತ್, ಏನೇನೋ ಯೋಚನೆ ಮಾಡಿಬಿಟ್ಟೆ. ಒಂದಕ್ಕೊಂದಕ್ಕೂ ಸಂಬಂಧವೇ ಇಲ್ಲದಂತೆ ಎತ್ತೆತ್ತಲೋ ತನ್ನ ಆಲೋಚನಾ ಕುದುರೆ ಓಡಿತಲ್ಲ ಎನಿಸಿತು. ಮನಸ್ಸಿಗೆ ಏನೋ ಸ್ವಲ್ಪ ಸಮಾಧಾನವಾಯಿತು. ಇದನ್ನೆಲ್ಲಾ ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂದುಕೊಂಡಳು. ಮರುಕ್ಷಣವೇ ನೆನಪಾಯಿತು, ‘ಜೀವಂತಿಕೆಗಿಂತ ನಿರ್ಜೀವತೆಯತ್ತ ಮೋಹ ಜಾಸ್ತಿ’. ಮುಗುಳ್ನಗುತ್ತಲೇ Statusನಲ್ಲಿ ಹಾಕಿದರಾಯಿತು ಎಂದುಕೊಳ್ಳುತ್ತಾ ಕುರ್ಚಿಯಿಂದ ಮೇಲೆದ್ದಳು. ಲ್ಯಾಪ್ ಟಾಪ್ ನಲ್ಲಿ ಈಗ ಸಾಂಗ್ ಪ್ಲೇ ಆಗುತ್ತಿತ್ತು, ‘ಸಂಚಾರಿ ನೀ’.... :)</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEiGk2HAdOpuTegOicgd9IfL5vzZrcx81zY-MO3ibe2op-ogbpkOy9oxtKTdcjhRgGpANyEsm6O6V0Hio7UUaGVI6a6TtttadMjHi7ZIZHm12yXRCzoJR-1486p-K1esH3lVFQmFMeGUCXAM/s1600/Screenshot_2017-02-25-23-42-17-1.png" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEiGk2HAdOpuTegOicgd9IfL5vzZrcx81zY-MO3ibe2op-ogbpkOy9oxtKTdcjhRgGpANyEsm6O6V0Hio7UUaGVI6a6TtttadMjHi7ZIZHm12yXRCzoJR-1486p-K1esH3lVFQmFMeGUCXAM/s640/Screenshot_2017-02-25-23-42-17-1.png"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-6978595700944151582016-11-30T20:48:00.001-08:002016-11-30T20:48:07.263-08:00ಸುಂದರ ಸಮರಸದ ಬಾಳ್ವೆಗೆ ರೂಮಿಯವರ 35 ನುಡಿಮುತ್ತುಗಳು..<p dir="ltr">"ಒಲವಿಗರು ಕೊನೆಗೆಲ್ಲೋ ಸೇರುವುದಿಲ್ಲ, ಮೊದಲಿಂದ ಒಬ್ಬರಲ್ಲೊಬ್ಬರಿರುತ್ತಾರೆ." ಎಂದು ಹೇಳಿದ ರೂಮಿಯವರ ಪೂರ್ಣ ಹೆಸರು ಜಲಾಲ್ ಅದ್-ದೀನ್ ಮಹಮ್ಮದ್ ಬಾಲ್ಖಿ (30 ಸೆಪ್ಟೆಂಬರ್ 1207 - 17 ಡಿಸೆಂಬರ್ 1273 ) ಜಲಾಲ್ ಅದ್-ದೀನ್ ಮಹಮ್ಮದ್ ರೂಮಿ ಅಥವಾ ‘ರೂಮಿ’ ಎಂದೇ ಹೆಚ್ಚು ಜನಪ್ರಿಯರಾಗಿರುವ ಇವರು ಕ್ರಿ.ಶ.13ನೇ ಶತಮಾನದ ಪರ್ಷಿಯದ ಕವಿ, ನ್ಯಾಯಾಧೀಶ, ತತ್ವಶಾಸ್ತ್ರಜ್ಞ, ಮತ್ತು ಸೂಫಿ ಮಿಸ್ಟಿಕ್. ಇರಾನಿಯನ್ನರು,ಟರ್ಕೀ ಜನರು, ಆಫ್ಘನ್ನರು, ತಾಜಿಕ್ ಜನರು, ಮತ್ತು ಇತರೆ ಮಧ್ಯ ಏಷ್ಯದ ಮುಸ್ಲಿಮರು ಅಷ್ಟೇ ಅಲ್ಲದೆ ಭಾರತೀಯ ಉಪಖಂಡದ ಮುಸ್ಲಿಮರು ಇವರ ಆಧ್ಯಾತ್ಮಿಕ ವಿಚಾರಧಾರೆಯನ್ನು ಕಳೆದ ಏಳು ಶತಮಾನಗಳ ಅವಧಿಯಲ್ಲಿ ಮೆಚ್ಚಿಕೊಂಡಿದ್ದಾರೆ. ರೂಮಿಯವರ ಮಹತ್ವವು ರಾಷ್ಟ್ರೀಯ ಮತ್ತು ಜನಾಂಗೀಯ ಗಡಿಗಳನ್ನು ಮೀರುವಂಥದು ಎಂದು ಪರಿಗಣಿಸಲಾಗಿದೆ. ಅವರ ಕವಿತೆಗಳನ್ನು ವಿಶ್ವದ ಅನೇಕ ಭಾಷೆಗಳಲ್ಲಿ ವಿವಿಧ ಶೈಲಿಗಳಲ್ಲಿ ಭಾಷಾಂತರಿಸಲಾಗಿದೆ. 2007 ರಲ್ಲಿ ಅವರನ್ನು "ಅಮೇರಿಕಾದಲ್ಲಿ ಅತ್ಯಂತ ಜನಪ್ರಿಯ ಕವಿ." ಎಂದು ಬಣ್ಣಿಸಲಾಯಿತು.</p>
<p dir="ltr">ಅವರ 35 ಚಿಕ್ಕ ಕವಿತೆಗಳು ಇಲ್ಲಿವೆ, ಓದಿ, ಹಂಚಿಕೊಳ್ಳಿ!</p>
<p dir="ltr">1. ನನ್ನ ಮಾತು ಹಡಗಾದರೆ ಅದರ ಹುರುಳು ಇಡೀ ಕಡಲು. ಬಾ, ಬಗೆಯ ಅಂತರಾಳಕ್ಕೆ ಕರೆದೊಯ್ಯುತ್ತೇನೆ.</p>
<p dir="ltr">2. ನಿನ್ನೆ ಮುಗಿಯಿತು ಅದರ ಕತೆಯೊಡನೆ. ಇಂದು ಬಾಳಬೇಕು ಹೊಸ ಕತೆಯೊಳಗೆ.</p>
<p dir="ltr">3. ಹಿರಿಮೆಯ ನೇಸರ ನಾನು. ಒಡಲಲ್ಲಿ ಮುತ್ತುಗಳಿರುವ ಕಡಲು ನಾನು. ನನ್ನೆದೆಯಲ್ಲಿ ನಾಕದ ಪೆಂಪಿದೆ.</p>
<p dir="ltr">4. ದೀಪವಾಗು, ದೋಣಿಯಾಗು, ಇಲ್ಲದಿದ್ದರೇಣಿಯಾಗು. ಯಾರದಾದರೂ ಬಗೆಯನ್ನು ಮಾಯಿಸು. ಕುರುಬನಂತೆ ಮನೆ ಬಿಟ್ಟು ಹೊರಡು.</p>
<p dir="ltr">5. ಮಾತಿಗೆಟಕದ ಸೋಜಿಗಗಳನು ಎದೆಯಿಂದ ಕೇಳು.</p>
<p dir="ltr">6. ಸುಮ್ಮನಿದ್ದಾಗ ನನ್ನೊಳಗೆ ಗುಡುಗು ಅವಿತಿರುತ್ತದೆ.</p>
<p dir="ltr">7. ನೀ ನನಗೆ ಕೊಡುವುದನ್ನು ಬಗೆಗಣ್ಣಿಗೆ ಎಂದೂ ಬಗೆಯಲಾಗಿಲ್ಲ.</p>
<p dir="ltr">8. ನೀ ಪಡುತ್ತಿರುವ ಈ ನೋವುಗಳು ಓಲೆಗಳು. ಕೇಳಿಸಿಕೊ.</p>
<p dir="ltr">9. ನಿನ್ನೆ ನಾನು ತಿಳುವಳಿಕಸ್ತನಾಗಿ ಜಗವನ್ನೆ ಮಾರ‍್ಪಡಿಸಬೇಕೆಂದಿದ್ದೆ. ಇಂದು ಅರಿಗನಾಗಿ ನಾನೇ ಮಾರ‍್ಪಡುತ್ತಿದ್ದೇನೆ.</p>
<p dir="ltr">10. ಬಯಸುವುದು, ಮಾಡುವುದು, ಬೇಡುವುದು, ನಿನ್ನಿಂದ ದೂರ ಮಾಡುವುದೆಲ್ಲವನು ದೂರ ಮಾಡು ನನ್ನೊಲವೇ.</p>
<p dir="ltr">11. ಕಾಣದಷ್ಟೆತ್ತರದ ಜಾಗದ ಮೇಲೆ ನೀ ಕಣ್ಣಿಡು.</p>
<p dir="ltr">12. ತಿಳುವಳಿಕೆ ನಾವು ತಕ್ಕವರಲ್ಲವೆನ್ನುತ್ತಿದೆ; ಒಲವು ತಕ್ಕವರೆನ್ನುತ್ತಿದೆ; ನನ್ನ ಬದುಕು ಇವೆರಡರ ನಡುವೆ ಹರಿಯುತ್ತಿದೆ.</p>
<p dir="ltr">13. ಬೆಳಗಿನಲಿ ನಿನ್ನ ಹೊಗಳಿದೆ... ತಿಳಿಯದೆ ಇರುಳಿನಲಿ ನಿನ್ನೊಡನಿದ್ದೆ... ತಿಳಿಯದೆ ನಾನು ನಾನೆಂದುಕೊಂಡಿದ್ದೆ... ಆದರೆ ನೀನಾಗಿದ್ದೆ... ತಿಳಿಯದೆ.</p>
<p dir="ltr">14. ನನ್ನ ಬದುಕಿನ ತಿರುಳಿಷ್ಟೆ: ಸರಕಾಗಿದ್ದೆ; ಅಡುಗೆ ಮಾಡಲ್ಪಟ್ಟು ಪಳಗಿದೆ; ಒಲವಿನಲ್ಲಿ ಸುಟ್ಟೆ.</p>
<p dir="ltr">15. ನಿನ್ನ ಆತ್ಮ ನನಗೆಷ್ಟು ಹತ್ತಿರವೆಂದರೆ ನೀ ಯೋಚಿಸಿದ್ದೆಲ್ಲ ನನ್ನ ಮನಸ್ಸಿನಿಂದ ಹಾದುಹೋಗುತ್ತದೆ.</p>
<p dir="ltr">16. ಹಾಯ್ತನದಿಂದ ಓಡು, ಜೋಕೆಯಾಗಿರುವುದನ್ನು ಮರೆ, ಬದುಕಲು ಹೆದರಿಕೆಯೆಲ್ಲಾಗುವುದೋ ಅಲ್ಲಿ ಬದುಕು, ಗಳಿಸಿರುವ ಹೆಸರನ್ನು ಸುಟ್ಟಿಹಾಕಿ ಕೆಟ್ಟ ಹೆಸರನ್ನು ಗಳಿಸು. ಮುನ್ನೆಚ್ಚರದಿಂದ ಎಲ್ಲವನ್ನೂ ಯೋಚಿಸಿದ್ದು ಮಾಡಿದ್ದು ಸಾಕು, ಇನ್ನು ಹುಚ್ಚನಾಗು.</p>
<p dir="ltr">17. ನಿನ್ನ ಅಂತರಾತ್ಮವನ್ನು ಮದುವೆಯಾಗು. ಅದೇ ದಾರಿ.</p>
<p dir="ltr">18. ಇರಬೇಕೋ ಇರಬೇಡವೋ ಎಂಬ ಗೊಂದಲವೆನಗಿಲ್ಲ. ಎರಡು ಲೋಕಗಳಿಂದಲೂ ತಪ್ಪಿಸಿಕೊಳ್ಳುವುದು ಕೆಚ್ಚೆದೆಯ ಗುರುತಲ್ಲ. ಎನ್ನೊಳಗಡಗಿರುವ ಬೆರಗುಗಳನು ತಿಳಿಯದೆ ಹೋಗುವುದು ಹುಚ್ಚಲ್ಲವಾದರೆ ಮತ್ತಾವುದು?</p>
<p dir="ltr">19. ಬಯಕೆಯ ಗದ್ದಲದಲಿ ನಿನ್ನೊಲವು ಎದೆಯಲಡಗಿರುವುದ ತಿಳಿಯೆ. ನಿಲ್ಲಿಸು ಆ ಗದ್ದಲವನು! ಮೌನದಲಿ ಅವನ ಮಾತು ಕೇಳದಿರದು.</p>
<p dir="ltr">20. ನಾ ತೆರೆದುಕೊಳ್ಳಲು ನೀ ತೆರೆದುಕೊ. ನನ್ನ ಪ್ರೇರಣೆಯನ್ನು ಕಂಡುಕೊಳ್ಳಲು ನಿನ್ನದನ್ನು ತಾ.</p>
<p dir="ltr">21. ನಿನ್ನ ಬೆಳಕಲಿ ಒಲವನು ಕಲಿತೆ, ನಿನ್ನಂದದಲಿ ಹಾಡುವುದ ಕಲಿತೆ. ಎನ್ನೆದೆಯೊಳಗೆ ನೀ ಕುಣಿಯುವೆ - ಯಾರಿಗೂ ಕಾಣದಂತೆ.</p>
<p dir="ltr">22. ನನಗೆ ಹೆಚ್ಚಿಗೆಯೇನು ಗೊತ್ತಿಲ್ಲ. ಒಲವನ್ನು ಕುಡಿದು ಮತ್ತೇರಿದೆಯಷ್ಟೆ.</p>
<p dir="ltr">23. ಹತ್ತಿರವಾದಷ್ಟೂ ನಾನೆಷ್ಟು ದೂರವೆಂಬ ಅರಿವು.</p>
<p dir="ltr">24. ಸರಿ-ತಪ್ಪುಗಳಾಚೆಗೊಂದು ಬಯಲಿದೆ. ನಾ ನಿನಗಲ್ಲಿ ಸಿಗುತ್ತೇನೆ.</p>
<p dir="ltr">25. ಒಳ್ಳೆಯ ಗೆಳೆಯನಿರೆ ಕನ್ನಡಿಯೇಕೆ?</p>
<p dir="ltr">26. ಹುಣ್ಣೆಂಬುದು ಬೆಳಕು ಒಳಹೊಕ್ಕುವ ಕಿಂಡಿಯಯ್ಯ.</p>
<p dir="ltr">27. ಬೀಳುಗೆಯಾಯಿತು. ಈಗೆನ್ನ ಏಳಿಗೆಯ ನೋಡಿ.</p>
<p dir="ltr">28. ಬಾನನ್ನು ಕರುಳಿನಿಂದ ಮಾತ್ರ ಮುಟ್ಟಬಲ್ಲೆ.</p>
<p dir="ltr">29. ನಿನ್ನ ನಿಜವಾದ ಒಲವಿನ ಹೆಚ್ಚಿನ ಸೆಳೆತಕ್ಕೆ ಸದ್ದಿಲ್ಲದೆ ಒಳಗಾಗು.</p>
<p dir="ltr">30. ಇದ್ದಂತೆ ಕಾಣು ಇಲ್ಲವೇ ಕಂಡಂತಿರು.</p>
<p dir="ltr">31. ಒಲವಿಗರು ಕೊನೆಗೆಲ್ಲೋ ಸೇರುವುದಿಲ್ಲ, ಮೊದಲಿಂದ ಒಬ್ಬರಲ್ಲೊಬ್ಬರಿರುತ್ತಾರೆ.</p>
<p dir="ltr">32. ನೀರಿನ ಅಲೆಗಳು ನಿಲ್ಲಲಿ, ನಿನ್ನೊಡಲಿನ ಚಂದ್ರ ನಕ್ಷತ್ರಗಳನ್ನು ಕಾಣುವೆಯಂತೆ.</p>
<p dir="ltr">33. ಹುಟ್ಟಿನಿಂದ ರೆಕ್ಕೆಯಿದ್ದು ತೆವಳುವ ಬಾಳೇಕೆ?</p>
<p dir="ltr">34. ನಿನ್ನ ತಿಳುವಳಿಕೆಯನ್ನು ಮಾರಿ ಸೋಜಿಗವನ್ನು ಕೊಂಡುಕೊ.</p>
<p dir="ltr">35. ಉಜ್ಜಿದಾಗೆಲ್ಲ ಸಿಟ್ಟಾದರೆ ನಿನ್ನ ಹೊಳೆಸುವುದು ಹೇಗೆ?</p>
<p dir="ltr">ಮಾಹಿತಿ: ವಿಕಿಪೀಡಿಯ.<br>
ಚಿತ್ರಗಳು, ಕವಿತೆಗಳು: rumikannada.</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEgSU0VJIKnISFfEMmo0GuFzInQlu-2JZ8Z2sN-t86JllO1quXYTY9-h8ANusVPrR13PVSKOyvPKq6TrNtlbJ_zP1sL9j_frgIIGkkmfkFe706RIALScpZiUrNJYuR0exOUTUAFeCsVv3O-L/s1600/Screenshot_2016-12-01-10-15-21-1.png" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEgSU0VJIKnISFfEMmo0GuFzInQlu-2JZ8Z2sN-t86JllO1quXYTY9-h8ANusVPrR13PVSKOyvPKq6TrNtlbJ_zP1sL9j_frgIIGkkmfkFe706RIALScpZiUrNJYuR0exOUTUAFeCsVv3O-L/s640/Screenshot_2016-12-01-10-15-21-1.png"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-74830559341574288862015-12-01T00:28:00.001-08:002015-12-01T00:28:36.190-08:00 ಪ್ರೇಮ ಕಥೆ-Love story- कहानी प्यार की<p dir="ltr">ಜೀವನದಲ್ಲಿ ಒಮ್ಮೊಮ್ಮೆ ನಮ್ಮ ಪ್ರೀತಿ ಪಾತ್ರರು ಅನಿರೀಕ್ಷಿತವಾಗಿ ನಾವು ಅಪೇಕ್ಷಿಸಿದ್ದಕ್ಕಿಂಲೂ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಪ್ರೀತಿಸುತ್ತಾರೆ.. ಈ ಸಮಯವನ್ನೇ ಜೀವನದ ಮಹತ್ತರ ತಿರುವು ಎನ್ನಬಹುದು. ಇಂತಹ ಅಮೂಲ್ಯ ಸಮಯಕ್ಕಾಗಿ ತಾಳ್ಮೆಯಿಂದ ಕಾಯುವುದನ್ನು ಕಲಿತರೆ ಅತ್ಯುತ್ತಮ ಪ್ರೇಮ ಕಥೆ ನಮ್ಮದಾಗುತ್ತದೆ..��<br>
</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEiKvNVD1v05ZcTHaWDPaVqlyRz6Wro-yB0LcLNolrXrvElTs_v6D3WEwkySP61AtzJzlnxOoFV5bBsZNJzt7u86_qi9PijG4VkiA1l19brvvwNQgpIYwqQfMQH-tLrBvhtjNdpN65dAukoN/s1600/images.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEiKvNVD1v05ZcTHaWDPaVqlyRz6Wro-yB0LcLNolrXrvElTs_v6D3WEwkySP61AtzJzlnxOoFV5bBsZNJzt7u86_qi9PijG4VkiA1l19brvvwNQgpIYwqQfMQH-tLrBvhtjNdpN65dAukoN/s640/images.jpg"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-4510381664935916732015-11-08T23:03:00.001-08:002015-11-08T23:05:08.178-08:00ಹಾಗೆ ಸುಮ್ಮನೆ ಒಂದು ವರುಷ.. :)<p dir="ltr"> "ಹಾಗೆ ಸುಮ್ಮನೆ" ಮನದ ಕದವ ತೆರೆದು ಇಣುಕುವ ಭಾವನೆಗಳ ಕೂಡಿಡುವ ಪ್ರಯತ್ನದಲ್ಲಿ ತೋಚಿದ್ದು ಗೀಚಿಡಲು ವರ್ಷದ ಹಿಂದೆ ಬ್ಲಾಗೊಂದನು ಆರಂಭಿಸಿದೆ..ಈ ಬ್ಲಾಗಿಗೆ ಇಂದು ವರುಷದ ಸಂಭ್ರಮ..<br>
ಆರಂಭ ಶೂರಳಂತೆ ಬಿಡುವಿನ ಸಮಯದಲ್ಲಿ ಕೆಲ ಬರಹಗಳನ್ನು ಗೀಚಿ ಸುಮ್ಮನಾದ ನನಗೆ ಬ್ಲಾಗಿನ ಮೌನರಾಗಕ್ಕೆ ಕಿವಿಗೊಟ್ಟಾಗ ಅರಿವಿಲ್ಲವದಂತೆ ಅರಿವಿಗೆ ಬಂದದ್ದು ವರುಷವೊಂದು ಸದ್ದಿಲ್ಲದೆ ಉರುಳಿದ್ದು..ಸಮಯ ಸಾಗುವ ಪರಿಯ ತಡೆಯುವ ಗತಿಯ ನಾ ಕಾಣೆಯಾದರೂ ಕಳೆವ ಕ್ಷಣಗಳ ಸ್ವರಗಳನ್ನು ಕೂಡಿಡುವ ಪ್ರಯತ್ನಕ್ಕೆ ಪ್ರೇರೇಪಿಸಿ ಹಾರೈಸಿದ ಎಲ್ಲರಿಗೂ loads of love�� and thank you��<br>
ನಿಮ್ಮೆಲ್ಲರ ಪ್ರೀತಿ ಸದಾ ಇರಲಿ..ಅನಿಸಿಕೆ ಬರೆಯಲು ಮರೆಯದಿರಿ..��</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEhAyBQW_HAilZ1-hzU5ziqTACpqJ58HIoaZWnceNIUig-XoSBOsSvf7lgxNIA79-rup6wvWgzSbpolLLNhW8qDsFTc6EZeIe32b5YV9cRL9iE8URffzBfJgXLqotA8qlmCn-hjPxa3iOnp4/s1600/images%252520%25252842%252529.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEhAyBQW_HAilZ1-hzU5ziqTACpqJ58HIoaZWnceNIUig-XoSBOsSvf7lgxNIA79-rup6wvWgzSbpolLLNhW8qDsFTc6EZeIe32b5YV9cRL9iE8URffzBfJgXLqotA8qlmCn-hjPxa3iOnp4/s640/images%252520%25252842%252529.jpg"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-84893503516735285002015-10-17T11:58:00.001-07:002015-10-17T11:58:15.392-07:00ಕನಸಿನ ಪ್ರೀತಿಯ ಸಾಲುಗಳು..<p dir="ltr">    ಅಚ್ಚಿ ನಿನ್ನ್ಮದುವೆ ಯಾವಾಗ ನೀ ಹಿಂಗೆ ಅದು ಬೇಡ ಇದು ಬೇಡ ಅಂಥ ಕಾಲ ನೂಕ್ತಿದ್ರೆ ಹೇಗೆ? Life is not a fairy tale ಸುಮ್ನೆ ಕನಸಿನ ಗೋಪುರ ಕಟ್ಬೇಡ ಅಂತ advice ಮಾಡಿದ ಸ್ನೇಹಿತೆಯೊಡನೆ ವಾದ-ವಾಗ್ವಾದ ಮುಗಿದ ನಂತರ ಹೇಗಿರಬೇಕು ನಿನ್ನ ಕನಸಿನ ಹುಡುಗ ಎಂದವಳು ಕೇಳಿದ ಪ್ರಶ್ನೆಗೆ ಈ ಸರಿ ರಾತ್ರಿಲಿ ಉತ್ತರ ನೀಡ್ಲೇಬೇಕಾ?ಉತ್ತರ ಕೇಳಿದ್ರೆ ನೀ ಬೆಚ್ಚಿ ಬೀಳ್ತಿ, ಇವಾಗ ಸುಮ್ನೆ ಮಲಗು ಟೈಮ್ ಸಿಕ್ಕಾಗ ನಾನೇ ನನ್ನ dream boy,dream life ಬಗ್ಗೆ  ಬ್ಲಾಗನಲ್ಲಿ ಬರೆಯುವೆ ಓದ್ಕೋ ಎಂದು ಹೇಳಿ ಸಾಂಗ್ಸ್ ಕೇಳ್ತಾ ನಿದ್ರೆಗೆ ಜಾರ ಹೊರಟ ನನ್ನ ಮನದ ಕಿಟಕಿಯಿಂದ ಇಣುಕಿದ್ದು ನನ್ನ ಕನಸಿನ ಹುಡುಗ.. ಕಾಕತಾಳೀಯವೋ ಏನೋ ಎಂಬಂತೆ ಅಂದು ಮೊಬೈಲ್ ಪ್ಲೇ ಲಿಸ್ಟನಲ್ಲಿ ಪ್ರೀತಿಯ ಹಾಡುಗಳೇ  ಕಿವಿಗೆ ಬಂದು ಅಪ್ಪಳಿಸುದ್ದವು. ಅವನ್ಯಾರೋ <u>ಒಂದಿನ</u> ಜೀವನದಲ್ಲಿ ಬರುವವನ ಬಗೆಗೆ ಕಟ್ಟಿದ ಕನಸುಗಳನ್ನೆಲ್ಲ ಹೇಳತೊಡಗಿದ್ದೆ ನನಗೆ ನಾನೇ..ಆಲೋಚನೆ ಆರಾಧನೆ ಎಲ್ಲ ಅವನದ್ದೇ ಆಗಿತ್ತು ಅಂದು.ಆ ಕನಸುಗಳಿಗೂ ಬಹುಶಃ ಒಂದು ಪರಿಧಿ,ಮಿತಿ, ವ್ಯಾಪ್ತಿ ಎಂಬುದಿಲ್ಲ ಮತ್ತು ಪಿಟೀಲು ಕುಯ್ಯೋದನ್ನು ನಂಗೆ ಹೇಳ್ಕೊಡ್ಬೇಕಿಲ್ಲ. ಹಾಗೆ ಸುಮ್ಮನೆ ಬ್ಲಾಗಿನ ಡ್ರಾಫ್ಟ್‌ ಬಾಕ್ಸಿನಲ್ಲಿ ಅವಿತು ಕುಳಿತ ಆ ದಿನ ಗೀಚಿಟ್ಟ ನನ್ನ ಕನಸ ಸಾಲುಗಳಿಗೆ ರೆಕ್ಕೆ ಬಂದು ನಿರೀಕ್ಷೆಯಂತೆ ಸಿಕ್ಕ ನನ್ನ ಪ್ರೀತಿಯ ಯಶದ ಮನದ ವಿಳಾಸಕ್ಕೆ ಹಾರ ಹೊರಟಿವೆ.<br>
   ಅವನೆಂದರೆ ನನ್ನ ಪ್ರಪಂಚವಾಗಿರ್ಬೇಕು..ಪ್ರಪಂಚದಲ್ಲಿ ಅವನಿಗಿಂತಲೂ ನಾನ್ಯಾರನ್ನೂ ಹೆಚ್ಚು ಪ್ರೀತಿಸಬಾರದು ಹಾಗೇ ಅವನೂ ಕೂಡ..ನನ್ನ ಹುಚ್ಚು ಭಾವುಕತೆಗಳ ನಡುವೆ ಅವನದ್ದೊಂದು ಭಾವ ಸೇರಿ ಬದುಕು ಭಾವಗೀತೆಯಾಗ್ಬೇಕು..ಭಾವಜೀವಿ ನಾನಾದರೆ ಅದರ ಭಾವನೆ ಅವನಾಗಿರಬೇಕು..ನನ್ನೊಲವ ದಾರಿಯಲಿ ಬರಬೇಕೆನ್ನುವ ಆ ನನ್ನ ಪ್ರೀತಿಯ ಹುಡುಗನೊಡನೆ ಹಾಕುವ ಪ್ರತೀ ಹೆಜ್ಜೆಯ ಗುರುತುಗಳಲ್ಲಿ ಪ್ರೀತಿಯ ಕನಸುಗಳಿರಬೇಕು. ಕೈ ಹಿಡಿದು ಸಾಗುವ ಬಾಳ ಪಯಣದ ಕಂಗಳಿಗೆ ಕಣ್ರೆಪ್ಪೆಯಂತೆ ಅವನ ಕಾವಲಿರಬೇಕು..ಆ ಮನಸು ಕನಸುಗಳ ಪಿಸುಮಾತುಗಳಿಗೆ ಪ್ರೀತಿ ದನಿಯಾಗಬೇಕು. ವಾತ್ಸಲ್ಯಭರಿತ ಬದುಕ ಕಟ್ಟಬೇಕು.. ನನ್ನ ಬದುಕಿನ ಭಾಗವಾಗಿರದೇ ನನ್ನ ಬದುಕೆಂಬ ಪಯಣಕ್ಕೆ ಅವನೇ ಹೆಸರಾಗಬೇಕು..ಕಟ್ಟಿದ ಆಸೆಗಳ ಗೋಪುರದ ತುತ್ತ ತುದಿಯವೆರಗೂ ಜೊತೆಗೇ ಕೈ ಹಿಡಿದು ನಡೆದರೆ ಅದ್ಯಾವ ಸುಸ್ತು, ದಣಿವು ಸನಿಹ ಸುಳಿಯಲಾರದು.. ಹೊಟ್ಟೆ ಹುಣ್ಣಾಗಿಸುವಂತೆ ನಕ್ಕಾಗ, ಅದೇ ನಗುವಿನ ಪ್ರತಿಫಲನ ನಮ್ಮ ಪ್ರೀತಿಯನ್ನೇ ನೆನಪಿಸುವಂತಿದ್ದರೆ ನಾ ಎಂದಿಗೂ ನಗುತ್ತಲೇ ಇರುವೆ.. ಹಟಕ್ಕೆ ಬಿದ್ದ ಮನಸಿನ ಚಿತ್ರಗಳನ್ನೆಲ್ಲ ಒಮ್ಮೆ ಬಣ್ಣ ಹಾಕಿ ಹೃದಯದ ಫ್ರೇಮ್ನಲ್ಲಿ ಕಟ್ಟಿಸಿಡಬೇಕು..ಕೆಲವೊಂದು ಬೇಸರ ಅಳು ದುಃಖಗಳ ನಡುವೆಯೂ ನನಗೆ ಅವನು, ಅವನಿಗೆ ನಾನೆಂಬ ಸೆಕ್ಯೂರ್ ಫೀಲ್ ಇದ್ರೆ ಸಾಕು<br>
ಪ್ರೀತಿಯೆಂಬ ಬೆರಳಿನ ತುದಿ ತಾಕಿದಾಗಲೂ ಅದೇ ಸಂತಸವಿದ್ದರೆ ಇನ್ನೇನು ಬೇಕು..ಹುಣ್ಣಿಮೆ ಬೆಳದಿಂಗಳಲ್ಲಿ ಅವನ ಮಡಿಲಲ್ಲಿ ಮಲಗಿ ಇಬ್ಬರೂ ಸೇರಿ ಚಂದ್ರನ ಅಂಗಳದಿ ಮೂಡಿರೋ ಚುಕ್ಕಿಗಳ ಲೆಕ್ಕ ಹಾಕಬೇಕು. ಮರೆಯಾಗದೇ ಇರುವ ಹುಚ್ಚು ಕನಸುಗಳಿಗೆ ನನಸೆಂಬ ಗೇಟ್ ಪಾಸ್ ಕೊಟ್ಟರೆ ಬದುಕು ಅದೆಷ್ಟು ಸುಂದರ..<br>
   ಸಂಬಂಧಗಳು ಭದ್ರವಾಗಿರಬೇಕು.ಬಾಂಧವ್ಯದ ಬೆಸುಗೆಯಲ್ಲಿ ನನ್ನದೊಂದು ಪ್ರೀತಿಯ ಪಾಲಿದ್ದರೆ ಅವನದೊಂದಿರಬೇಕು.. ಆಶಿರ್ವಾದ, ಹಾರೈಕೆಗಳ ಜೋಗುಳದ ಹಾಡಿನಲ್ಲಿ ಒಂದು ಸ್ವರ ನನ್ನದಾದರೆ ಮತ್ತೊಂದು ಅವನದಾಗಿರಬೇಕು..ಸುಂದರ ಬಾಳ ಪಯಣದಲ್ಲಿ ನನ್ನದೊಂದು ಹೆಜ್ಜೆಯಾದರೆ ಅವನದೊಂದಿರಬೇಕು.. ಯಾರು ಸರಿ ಯಾರು ತಪ್ಪೆಂಬ ವಾದಕ್ಕಿಂದ ಬದುಕನ್ನು ಹೆಚ್ಚು ಹೆಚ್ಚು ಪ್ರೀತಿಗಳಿಂದ ಪ್ರೀತಿಯಲಿ ತೇಲಿಸುವಂತಿರಬೇಕು. ಪ್ರತೀ ಮುಂಜಾವೂ ಅವನ ಮುಖ ನೋಡಿ ಪ್ರೀತಿಯೊಂದಿಗೆ ದಿನ ಆರಂಭವಾಗಬೇಕು..ಭಟ್ಟರ ಹಾಡಿನ ನನ್ನ favourite ಸಾಲಿನ ಪ್ರೀತಿಯಂತೆ ಅವನಿರದ ಯಾವ ಸ್ವಪ್ನವೂ ಕೂಡ ಈ ನನ್ನ ಕಂಗಳಿಗೆ ಬೇಡವೇ ಬೇಡ..ಏನೇ ಆದರೂ ನಾನೆಲ್ಲೇ ಹೋದರೂನು ಅವನ ಜೀವ ನನ್ನಲ್ಲೇ ಇರುವಂತೆ ಅವ ನನ್ನ ಹಿಂಬಾಲಿಸಬೇಕು.ಖುಷಿಯಲ್ಲಿ ಅವನನ್ನು ಬಿಗಿದಪ್ಪಿ ನಾ ಬಿಕ್ಕಿ ಮನಸಾರೆ ಅತ್ತುಬಿಡಬೇಕು ಹೀಗೆ ಅಚ್ಚು ಮೆಚ್ಚಾಗಿರುವ ನನ್ನ ಭಾವ ಸರಿತೆಯಲ್ಲಿ ಅಚ್ಚಿನ ದೋಷಗಳು ಎಂದಿಗೂ ಮೈದೋರದೆ ಬಾಳು ಜೀವನದಿಯಾಗಿ ಹರಿಯಬೇಕು.<br>
   ನಾ ಹಣತೆ ಹಚ್ಚಿದರೆ ಅದರ ಬೆಳಕು ಎಂದೆಂದಿಗೂ ಅವನಾಗಬೇಕು.. ಬಾನಂಗಳದಿ ಮೂಡಿದ ಸೂರ್ಯೋದಯ ಸೂರ್ಯಾಸ್ತದ ಸುಂದರ ಚಿತ್ತಾರ, ತುಂತುರು ಮಳೆಯ ಸಿಂಚನವ ಸವಿಯಬೇಕು ಬಿಸಿ ಬಿಸಿ ಕಾಫಿಯೊಡನೆ ಇಬ್ಬರೂ. ಖಾಲಿಯಾಗದ ಒಂದಷ್ಟು ಭಾವನೆಗಳ ಲೋಕದಲಿ ನಾನು ಅವನು ಮಾತ್ರ ಇರಬೇಕು ಬದುಕಿನಲ್ಲಿಯ ಬದುಕು ನಾವಾಗಬೇಕು.. <br>
   ಒಂದೇ ಒಂದು ದಿನ ಇಬ್ಬರಲ್ಲಿ ಒಬ್ಬರು ಮನೆಯಲ್ಲಿಲ್ಲದಿದ್ದರೂ ಮಾತುಗಳು ಕೇಳಿಸುತ್ತಿರುವಂತೆ ಅವನ ಪ್ರತೀ ಮೌನದಲ್ಲಿಯೂ ನನ್ನ ಧ್ವನಿಯನ್ನು ನನ್ನ ಪ್ರತೀ ಮೌನದಲ್ಲೂ ಅವನ ಧ್ವನಿ ಹೊರಹೊಮ್ಮಿಸಬೇಕು. ಸಮಯ ಸಿಕ್ಕಾಗಲೆಲ್ಲ ಔಟಿಂಗ್ ನೆವದಲ್ಲಿ ಅಲೆಮಾರಿಗಳಂತೆ ಊರೂರು ಸುತ್ತಬೇಕು.ಕಣ್ಣಿನ ಕ್ಯಾಮರಾದಲ್ಲಿ ಮತ್ತು ಕ್ಯಾಮರಾದ ಕಣ್ಣಲ್ಲಿ ತೆಗೆಯುವ ಪ್ರತೀ ಫೋಟೋವನ್ನು ಹೃದಯದಲಿ ಕಟ್ಟಿಸಿಡಬೇಕು. ಸಮುದ್ರದ ದಡದಲ್ಲಿ ನಾ ಕಟ್ಟುವ ಮರಳ ಪುಟ್ಟ ಗುಬ್ಬಚ್ಚಿ ಗೂಡಿಗೆ ಅವ ಗುಬ್ಬಿಯಾದರೆ ನಾ ಗುಬ್ಬಿಮರಿಯಾಗಬೇಕು.. ನಮ್ಮ ಪ್ರೀತಿ ನೋಡಿ ಹೊಟ್ಟೆಕಿಚ್ಚಿನಿಂದ ಅಬ್ಬರಿಸುವ ಕಡಲ ಸೂರ್ಯಾಸ್ತಕ್ಕೆ ಏಕಾಂತದಲ್ಲಿ ಇಬ್ಬರೂ ಸಾಕ್ಷಿಯಾಗಬೇಕು. ಅಲೆಗಳಾಗಿ ಬರುವ ಖುಷಿಯಲ್ಲೂ, ಬೇಸರದ ಬೇಗುದಿಯಲ್ಲೂ ಆಸರೆಯಾಗುತ್ತ ಸೊಗಸಾದ ಮೌನದ ಗಳಿಗೆಯಲ್ಲೂ ಪ್ರೀತಿಯ ಕನವರಿಕೆ ಪುಟದ ಮರೆಯಲ್ಲಿ ಇಣುಕುತ್ತಿರಬೇಕು.<br>
ಬೆಳದಿಂಗಳಲಿ ಕೈಹಿಡಿದು ಒಬ್ಬರಿಗೊಬ್ಬರು ಕೈ ತುತ್ತ ತಿನ್ನಿಸುತ್ತ ಮತ್ತೊಮ್ಮೆ ಮಗದೊಮ್ಮೆ ನೂರು ವರುಷ ಜೊತೆ ಜೊತೆಯಲಿ ಕಳೆಯಬೇಕು .. <br>
     ಅವನ್ಯಾರೋ ಏನ್ ಮಾಡ್ತಿದ್ದಾನೋ ಆ ಹೊತ್ತಿಗೆ ಅಂತೆಲ್ಲ ಎಷ್ಟೋ ಸಲ ಯೋಚಿಸಿದ್ದೆ..ನನ್ನ ಪ್ರೀತಿಯನ್ನೆಲ್ಲ ಜತನದಿಂದ ಹೃದಯದ ಪುಟ್ಟ ಗೂಡಿನಲ್ಲಿ ಜೋಪಾನವಾಗಿ ಕೂಡಿಟ್ಟಿರುವೆ. ಪ್ರೀತಿಯ ಪತ್ರಗಳನ್ನೆಷ್ಟೋ ವಿಳಾಸವಿಲ್ಲದ, ಗೊತ್ತಿಲ್ಲದ ನನ್ನ ಪ್ರೀತಿಯ ಹುಡುಗನಿಗೆ ಬರೆದು ಭದ್ರವಾಗಿ ಇರಿಸಿದ್ದೆ. ನಾ ಹೇಗೆ ಯೋಚಿಸ್ತಿನೋ ಬಹುಶಃ ನನಗಾಗಿ ಹುಟ್ಟಿದ ಅವನೂ ನನ್ನಂತೆಯೇ ಯೋಚಿಸ್ತಾನೇನೋ.. ಭಾವನೆಗೆ ಬೇಕಿಲ್ಲ ರೂಪ ಬಣ್ಣ..ನಮ್ಮಿಬ್ಬರಲೂ ಅರ್ಥ ಮಾಡಿಕೊಳ್ಳುವ ಮನಸ್ಸೊಂದಿದ್ದರೆ ನನ್ನ ಹೃದಯದಲಿ ಎಂದೂ ಗುನುಗುನಿಸುವ ಹಾಡು ಅವನದ್ದೇ ಹಾಗೇ ಅವನ ಹೃದಯದಲಿ ಗುನುಗುನಿಸುವ ಹಾಡು ನಾನಾಗಿರಬೇಕು. ನನ್ನ ಮನ ಯೋಚಿಸುವ ಪ್ರತೀ ಕ್ಷಣವೂ ಅವನೇ ಆಗಿರಬೇಕು..ನಮ್ಮ ಬಗೆಗಿನ ನಮ್ಮ ಭಾವನೆಯಲ್ಲಿಯೇ ಬದುಕು ಕಟ್ಟೋಣ.. ಡಿಸ್ನಿ ಲ್ಯಾಂಡಿನ ಫೇರಿಟೆಲ್ ಮೂವಿಗಳಂತೆ ಲೈಫ್ "Happily ever after" ಅನ್ನೋ ತರಹ ಇರಬೇಕು. <br>
   ನಾ ಕಂಡ ಕನಸುಗಳೆಂಬ ನಕ್ಷತ್ರಗಳ ರಾಶಿ ರಾಶಿಗಳೆಷ್ಟೋ..ಅವುಗಳಲ್ಲಿ ನನಸಾಗುವುದೆಷ್ಟೋ.. ಒಂದೂ ತಿಳಿದಿಲ್ಲ.. ಆದರೆ ಅವನ ಬಗೆಗಿರುವ ಭರವಸೆಯೊಂದೇ ಬದುಕಿಗೆ ಚಿರಕಾಲ ಜಿನುಗುತ್ತಿರುವ ನಲುಮೆಯ ಸ್ಪೂರ್ತಿ..</p>
<p dir="ltr">#ಕನಸುಗಳು copyrighted & ಹಕ್ಕುದಾರನಿಗೆ ಪ್ರೀತಿಯಿಂದ dedicated..</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEgR7G9bwN83BLH0EfnkB2781oY5-xVgqz-aCo6m-IupDWODGII61Vc_Xo-BHYrTtGwyHdK0j1R59EvfEe7tVu2ft1yDWfz0U7Rohivztmnj5mfSpgBeb2gTgreRCmR7Mhj33bLOrjQGnhwM/s1600/images%252520%2525286%252529.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEgR7G9bwN83BLH0EfnkB2781oY5-xVgqz-aCo6m-IupDWODGII61Vc_Xo-BHYrTtGwyHdK0j1R59EvfEe7tVu2ft1yDWfz0U7Rohivztmnj5mfSpgBeb2gTgreRCmR7Mhj33bLOrjQGnhwM/s640/images%252520%2525286%252529.jpg"> </a> </div>Anonymoushttp://www.blogger.com/profile/08569784804915074890noreply@blogger.com3tag:blogger.com,1999:blog-5229584388114497227.post-69518206022897886602015-09-05T21:07:00.001-07:002015-09-09T01:49:26.306-07:00ಜಾರಿಯಲ್ಲಿರಲಿ ಪ್ರೀತಿ ಅನವರತ ಇದೇ ರೀತಿ..:)
<p dir="ltr"> ಅದೊಂದಿನ ತುಂಬಾ ದಿನಗಳ ನಂತರ ನನ್ನ ಫೋನಿನ ಪ್ಲೇ ಲಿಸ್ಟ್ನಲ್ಲಿ ಪ್ಲೇ ಆಗ್ತಾ ಇದ್ದ ಹಾಡಿನ ಸಾಲದು: 'ನೆನಪಿನ ಚಿಲಕ ಸರಿವ ಸದ್ದಿಗೆ was there a sound knock knock. . whose at the door knock knock. . could it be you knock knock. .'<br>
ಹಾಡು ಸಾಗಿದಂತೆ ನೆನಪಿನ ನವಿಲು ಗರಿ ಮನದಂಚಲಿ ಗರಿಗೆದರಿತು. .<br>
ಮನೆಗೆ ಹೋದಾಗ್ಲೆಲ್ಲ ಹಾಗೆ,ವಾಪಸ್ ಬರಬೇಕೆಂದು ಅನಿಸೋದೇ ಇಲ್ಲ . ಆಕಾಶದಂತಿರೋ ಅಪ್ಪ- ಅಮ್ಮ, ಸ್ನೇಹಿತರಿಗಿಂತಲೂ ಹೆಚ್ಚಿರುವ ತಂಗಿಯರು,ಅಕ್ಕ-ಅಣ್ಣಂದಿರು, ಮುಗ್ದ ದೊಡ್ಡಮ್ಮ ದೊಡ್ಡಪ್ಪ, ಪುಟಾಣಿ ಸಮನ್ವಿತಾ ಜೊತೆ ಓಡಾಡಿಕೊಂಡು ಇರಬೇಕು ಎಂದೆನಿಸುತ್ತದೆ .<br>
ಅದ್ಯಾಕೆ ಹಾಗಾಗತ್ತೋ ಗೊತ್ತಿಲ್ಲ ಪ್ರತಿಸಲ ಮನೆಯಿಂದ ಹೊರಡುವ ಹಿಂದಿನ ದಿನ ನನ್ನ ರೂಮು,ನನ್ನ ಮನೆ, ನನ್ನೂರು, ಅದೆಲ್ಲವನ್ನು miss ಮಾಡ್ತೇನೆ . ಕೊನೆಗೆ ನನ್ನ ಡ್ರೆಸ್ಸಿಂಗ್ ಟೇಬಲ್,ಮಂಚ, PC ಎಲ್ಲವನ್ನೂ ಪ್ರೀತಿಯಿಂದ ಸವರಿ ಮನೆಯ ಟೆರೆಸ್ ಮೇಲೆ ಕುಳಿತು ಸಂಜೆಯ ಸುಂದರ ಹೊಂಬೆಳಕ ಆಕಾಶವನ್ನು ಬಿಸಿ ಬಿಸಿ ಕಾಫಿ ಸವಿಯುತ್ತ ನೋಡುತ್ತಿದ್ದರೆ ಮನದೊಳಗೆ ಯೋಚನೆಗಳ ಮೆರವಣಿಗೆ ಹೊರಡುತ್ತವೆ . ಕಣ್ಣೀರು ತುಂಬಿ ಆಗಸ ಮಸುಕಾಗಿ ಕಂಡಾಗಲೇ ಗೊತ್ತಾಗೋದು ಆಗಸದಲ್ಲಿ ನಕ್ಷತ್ರಗಳು ನನ್ನ ಕಣ್ಣಲ್ಲಿ ಹನಿಗಳು ಮೂಡಿವೆ ಎಂದು.<br>
'ಭಾವನೆಗಳ ಮೂಕ ರೂಪವೇ ಈ ಕಣ್ಣ ಹನಿಗಳು. .'! ಶಬ್ದಗಳು ಹೇಳದ ಮಾತುಗಳನ್ನು ಹನಿ ಕಣ್ಣೀರು ಹೇಳುತ್ತದೆ. ನಾಳೆ ಇದೇ ಆಗಸವನ್ನು ಅಲ್ಲಿ ನೋಡಬೇಕಲ್ಲ ಎಂಬ ಯೋಚನೆಗೆ ಕಣ್ಣೀರು ಕೆನ್ನೆಯನ್ನು ತೋಯಿಸಿಬಿಡುತ್ತದೆ. bag pack ಮಾಡಲಂತೂ ಮನಸೇ ಬರುವುದಿಲ್ಲ. ಪ್ರತಿ ಸಲವೂ ಹೊರಡುವಾಗ ಗಡಿಬಿಡಿಯಿಂದ bag pack ಮಾಡೋದು ನೋಡಿ ಅಮ್ಮ ತಂಗಿಯರ ಗೊಣಗಾಟ ಶುರುವಾದಾಗ ಏನೇನೋ ಯೋಚನೆ ಮೂಡುತ್ತವೆ-ಅದ್ಯಾಕೆ ನಮ್ಮನೆ,ನಮ್ಮೂರು, ನನ್ ಫ್ಯಾಮಿಲಿ ಅಂದರೆ ಅಷ್ಟೊಂದು attachment ? ಪ್ರಶ್ನೆಯನ್ನು ಕೇಳಿ ನಾನೇ ಉತ್ತರವನ್ನು ನನಗೆ ತೋಚಿದ ರೀತಿಯಲ್ಲಿ ಇನ್ನೂ ಸ್ವಲ್ಪ ದಿನ ತಾನೆ PG ಮುಗಿದ ಮೇಲೆ ಮತ್ತೆ back to pavilion ಅಂತ ಹೇಳಿ ನಂಗೆ ನಾನೇ ಸಮಾಧಾನ ಮಾಡಿಕೊಳ್ತಿದ್ದೆ..<br>
ಆದ್ರೆ ಈಗ???? God blessed me with my dream boy..He found me when I was looking for him..<br>
ಮದುವೆಯಾಗಿ ಪ್ರೀತಿಯ ಇನ್ನೊಂದು ಗೂಡು ಸೇರಿದ ಬಳಿಕ ನಾ ಬೆಳೆದ ಮನೆಯಂಗಳ, blessing ತರಹ ಇರುವ ಅಪ್ಪ-ಅಮ್ಮ, ಪುಟ್ಟ ತಂಗಿಯರು, ಆತ್ಮೀಯವಾಗಿ ಬರಮಾಡಿಕೊಂಡಂತೆ ಕಾಣುವ ನನ್ನ ರೂಮು, ನೆಟ್ಟಿ ಬೆಳೆಸಿದ ಹೂಗಿಡಗಳು,ಪಿತಾಂಬರ ವರ್ಣದ ದಿಗಂತ ಮತ್ತು ಅದರ ಬೆಳ್ಳಿ ಅಂಚಿನ ಮೋಡಗಳು, ಆ ಮೋಡಗಳಲ್ಲಿ ಕಟ್ಟಿಕೊಂಡ ಕನಸುಗಳು, ಮನೆ ಪಕ್ಕದಲ್ಲೇ ಇರೊ cricket ಸ್ಟೇಡಿಯಂ, ಬಾಲ್ಯದ ಗೆಳತಿ/ ಗೆಳೆಯರು, ಗುಡ್ಡದ ಸೂರ್ಯಾಸ್ತ , ಚಳಿಗಾಲದ ಇಬ್ಬನಿಯ ಬಿಂದುಗಳ ಹೊತ್ತ ಜೇಡರ ಬಲೆ, ರಕ್ತ ಸಂಬಂಧಗಳು .. ಇನ್ನೂ ಏನೇನೋ ..... ನೆನಪಾಗಿ ನನ್ನ ಸುಪ್ತ ಮನಸಿನ ಮೂಲೆಯೊಂದರಲ್ಲಿ ಅಡಗಿ ಕುಳಿತಿರುತ್ತವೆ . ಮನೆಯಿಂದ ಹೊರಡೋದು ಒಂದು ನೆಪವಾಗಿ ಕಾಡುತ್ತವೆ. . ಅದೇ ಎಲ್ಲವನ್ನೂ ಬಿಟ್ಟು ಹೊರಡಬೇಕಲ್ಲ ಎಂದು ಪ್ರತೀ ಬಾರಿ ಮೌನವನ್ನು ಅಪ್ಪುತ್ತೇನೆ, ದುಃಖ ಉಮ್ಮಳಿಸಿದಾಗ ಪಕ್ಕದಲ್ಲೇ ಕೂತಿರುವ ತಂಗಿಯರ common dialogue ಪ್ಲೇ ಆಗುತ್ತದೆ: 'hey mad ಯಾಕ್ ಅಳ್ತೀ??' ಕಾರಣ ಗೊತ್ತಿದ್ದೂ ಕೇಳುವ ಆ ಪ್ರಶ್ನೆಗೆ ತುಸು ಕೋಪದಿಂದಲೇ u will get to know when ur turn comes ಅಂತ ಹೇಳಿ ಅಲ್ಲಿಂದ ಎದ್ದು ಒಳ ನಡೆದಾಗ ಪುಟ್ಟ ತಂಗಿಯ ಕೀಟಲೆ ಶುರುವಾಗುತ್ತದೆ..<br>
PG ದಿನಗಳಲ್ಲಿ bustandಗೆ ಬಿಡಲು ಬರುತ್ತಿದ್ದ ಅಪ್ಪನಿಗೆ ಟಾಟಾ ಹೇಳಿ ಬಸ್ ಏರಿ ಕುರುತ್ತಿದ್ದ ನನಗೆ ಊರನ್ನು ಎಲ್ಲೋ ಖಾಯಂ ಆಗಿ ಬಿಟ್ಟು ಹೋಗೋ ಭಾವನೆ ಆವರಿಸಿಬಿಡ್ತಿತ್ತು .! ಕಣ್ಣಲ್ಲಿ ಜೋಗ ನಯಾಗರ ಜಿನುಗಲು ರೆಡಿಯಾಗಿರುತ್ತಿತ್ತು. .<br>
ಪ್ರತೀ ಸಲ ಅಮ್ಮ ಅಪ್ಪ ನನ್ನ ಹೊಸ ಗೂಡಿಗೆ ಕಳುಹಿಸಲು ಬಂದಾಗ ಇಲ್ಲವೆ ಅವನು ನನ್ನ ಕರೆದುಕೊಂಡು ಹೋಗಲು ಬಂದಾಗ ಕಾರ್ ಹತ್ತಿ ಕುಳಿತಾಗ ಅದೆಲ್ಲಿಂದಲೋ ದುಃಖ ಉಮ್ಮಳಿಸಿ ಬಂದು ಭಾವನೆಗಳ ಸುಳಿಯಲ್ಲಿ ಸಿಕ್ಕಿ ಕಂಗಾಲಾಗುವ ಸ್ಥಿತಿ ವಿವರಿಸಿ ಹೇಳಲಸಾಧ್ಯ. <br>
ಈ ಎಲ್ಲ ಭಾವಗಳ ನಡುವೆ ಮೂಕಸ್ಮಿತಳಾಗಿ ಯೋಚನಾ ಲಹರಿಯಲ್ಲಿ ಕಳೆದು ಹೋದಾಗ ನನ್ನ moible ರಿಂಗಣಿಸಿದಾಗಲೇ ಎಚ್ಚರವಾದದ್ದು .! 'Maa calling' ಎಂದು ತೋರಿಸುತ್ತಿತ್ತು .<br>
ಅಮ್ಮನೊಡನೆ ಮಾತನಾಡಿ ಫೋನ್ ಡಿಸ್ಕನೆಕ್ಟ ಮಾಡಿದ ನಂತರ ನಾ ಪ್ರೀತಿಯಿಂದ teddy ಎಂದು ಕರೆಯುವ ಪುಟ್ಟ ತಂಗಿಯಿಂದ message ಬಂದಿತ್ತು "missing u stupid..come soon and get something for me " ಮೆಸೇಜ್ ಓದಿದ ಬಳಿಕ ಕಣ್ಣೀರ ಸಿಂಚನವಾದ ಮೊಗದಲ್ಲಿ ನಗೆಯ ಹೂಮಳೆ!'<br>
ಜೀವನ ಅಂದ್ರೆ ಹೀಗೆ ಅಲ್ವಾ? ಊರು, ಅಪ್ಪ-ಅಮ್ಮ, ತಂಗಿಯರನ್ನ ನಾನು miss ಮಾಡೋವಂತೆಮಾಡಿ ನನ್ನ ಪ್ರೀತಿಯ ಪ್ರಪಂಚಕ್ಕೆ ಇನ್ನಷ್ಟು ಪ್ರೀತಿಯ ಮಳೆ ಸುರಿದು ಅಪೇಕ್ಷೆಯ ನಿರೀಕ್ಷೆಯಂತೆ ಸಿಕ್ಕ ಪ್ರೀತಿಯ ಯಶ ಜಾರಿಯಲ್ಲಿರಲಿ ಪ್ರೀತಿ ಅನವರತ ಇದೇ ರೀತಿ. . :)</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEg1q3jAjNi3IS7jHsU1qRDLJ2vKyTtmyg3tEL_yFh7k5BVSZQW50HUm4jzx0z-MYHAOw5OMAUBIx2-gcvez98AJD9hc9dOiefxm0WL_a3huKLISnYsOdHTzwZ-OuwLvKt80LbK5YrQCxSBv/s1600/beautiful-love-cover-photos-for-facebook-timeline-love-hearts-wood-wallpapers-high-definition-wallpapers--photos%252520-%252520Copy.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEg1q3jAjNi3IS7jHsU1qRDLJ2vKyTtmyg3tEL_yFh7k5BVSZQW50HUm4jzx0z-MYHAOw5OMAUBIx2-gcvez98AJD9hc9dOiefxm0WL_a3huKLISnYsOdHTzwZ-OuwLvKt80LbK5YrQCxSBv/s640/beautiful-love-cover-photos-for-facebook-timeline-love-hearts-wood-wallpapers-high-definition-wallpapers--photos%252520-%252520Copy.jpg"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-21723878757160656752015-08-17T11:10:00.000-07:002015-08-18T22:22:16.917-07:00ನೆನಪಿನ ನವಿಲು ಗರಿ. .<div dir="ltr" style="text-align: left;" trbidi="on">
<br>
ಚಿಕ್ಕವಳಿದ್ದಾಗ ನನ್ನ ಆಪ್ತ ಸ್ನೇಹಿತೆಯೊಬ್ಬಳು ಹೇಳಿದ್ದಳು ನವಿಲು ಗರಿ ಪುಸ್ತಕದಲ್ಲಿ ಇಟ್ಟರೆ ಮರಿ ಹಾಕುತ್ತೆ ಅಂತ!! ಅವತ್ತೇ ನನ್ನ<br>
ದೊಡ್ಡಪ್ಪನನ್ನು ಕಾಡಿ ಬೇಡಿ ದೇವಸ್ಥಾನದಲ್ಲಿದ್ದ ದೇವರ ನವಿಲು ಗರಿ ಬೆತ್ತದ ಒಂದು ಗರಿಯನ್ನು ತೆಗೆದುಕೊಂಡು ಗೋಕುಲಾಷ್ಟಮಿಯ ದಿನ ಪುಸ್ತಕದಲ್ಲಿ ಜೋಪಾನವಾಗಿ ಇಟ್ಟಿದ್ದೆ. ಇಂದಿಗೆ ಈ ನವಿರಾದ ನವಿಲು ಗರಿಗೆ 12 ವರ್ಷಗಳು.. ನವಿಲು ಗರಿ ಇನ್ನೂ ಮರಿ ಹಾಕೇ ಇಲ್ಲ.. ನವಿಲು ಗರಿ ಮರಿ ಹಾಕುತ್ತೆ ಅಂತ ಭ್ರಮಿಸಿದ ಮುಗ್ಧತೆಯ ಆ ಬಾಲ್ಯ ನೆನಪೇ ಸುಂದರ. .<br>
ಆ ನೆನಪಿಗೆ ಇನ್ನೂ ಆ ಗರಿಯನ್ನು ಪುಸ್ತಕದಲ್ಲಿ ಇಟ್ಟು ಕಾಯುತ್ತಿರುವ ನನ್ನ ಬಾಲಿಶ ಮಧುರ. .<br>This post is dedicated to her..<br>
Once again wish u many more happy returns of this day my<br>
tweety Meghana Kulkarni<br>
Loads of love on ur way..<br>
# ನೆನಪಿನ_ನವಿಲುಗರಿ :)<br>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEj0He7X-xP6U38PK-aUvhHKYYx8iBwBToYTe_Y2CBEcD-GFzjZYxuMmLaa7KeTc4Pg3qW_HevlXbgFmEsn6D2n76nlFcB09wZusOIUV2M6liz10Ke3_GhY9vvq4WVmLAoroet3A4zs_vbm5/s1600/PicsArt_1408282063271.jpg" imageanchor="1" style="margin-left: 1em; margin-right: 1em;"><img border="0" height="240" src="https://blogger.googleusercontent.com/img/b/R29vZ2xl/AVvXsEj0He7X-xP6U38PK-aUvhHKYYx8iBwBToYTe_Y2CBEcD-GFzjZYxuMmLaa7KeTc4Pg3qW_HevlXbgFmEsn6D2n76nlFcB09wZusOIUV2M6liz10Ke3_GhY9vvq4WVmLAoroet3A4zs_vbm5/s320/PicsArt_1408282063271.jpg" width="320"></a></div>
</div>
Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-8371041013699695422014-12-16T05:57:00.001-08:002015-08-18T22:24:06.847-07:00ಎಂದೂ ಮರೆಯದ ಹಾಡು.....<p dir="ltr"> ಅದೊಂದು ಮಧ್ಯಾಹ್ನ ಕಣ್ಣಿಗೆ ಬಿದ್ದ ಮುದ್ದಾದ ಹಸು ಮತ್ತು ಕರುವನ್ನು ನೋಡಿದಾಗಿಂದ ಮನಸ್ಸು ಇಂದೆಕೋ ಬಾಲ್ಯದ ದಿನಗಳಿಗೆ ನೆಗೆಯುತ್ತಿದೆ. ಅಂಗನವಾಡಿಯಲ್ಲೋ ಒಂದನೆಯ ತರಗತಿಯ ಪಠ್ಯದಲ್ಲಿ ಇರಬೇಕು "ಪುಣ್ಯಕೋಟಿ ಗೋವಿನ ಹಾಡು". ಆದರೆ ನಾನು ಮಾತ್ರ ಈ ಹಾಡನ್ನು ಶಾಲೆಗೆ ಸೇರುವ ಮುನ್ನವೇ ಅಪ್ಪನಿಂದ ಕೇಳಲ್ಪಟ್ಟಿದ್ದೆ. ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು, ಯಾರು ಮರೆತರು ನಾ ಮಾತ್ರ ಮರೆಯದ ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಮಕ್ಕಳು ಓದಲೇಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಭಾವನಾತ್ಮಕ ಪದ್ಯ.<br>
ಅಪ್ಪ ನಾ ಚಿಕ್ಕವಳಿದ್ದಾಗ ದಿನಾಲೂ ಒಂದೊಂದು ಕಥೆಯನ್ನು ಹೇಳುತ್ತಿದ್ದರು. ಕೆಲ ಸಲ ಇನ್ನೊಂದು ಮತ್ತೊಂದು ಮಗದೊಂದು ಕಥೆ ಹೇಳು ಅಪ್ಪನ ಬಳಿ ಹಠ ಮಾಡುತ್ತಿದ್ದ ನಾನು ಪುಣ್ಯಕೋಟಿಯ ಕಥೆ ಕೇಳಿದ ತಕ್ಷಣ ನನ್ನ ಕಣ್ಣುಗಳಿಂದ ನನಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು, ಕಥೆಯ "ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ" ಸಾಲುಗಳನ್ನು ಕೇಳಿದಾಕ್ಷಣ ದುಃಖ ಉಮ್ಮಳಿಸಿ ಬಂದು ಅಲ್ಲೇ ಅಪ್ಪನ ಹೊಟ್ಟೆಯ ಮೇಲೆ ಅಳುತ್ತ ಬಿಕ್ಕುತ್ತ ನಿದ್ದೆಗೆ ಜಾರುತ್ತಿದ್ದೆ. ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕೇಳಿದಾಗಲೆಲ್ಲ ಅಪ್ಪನ ಹೊಟ್ಟೆಯ ಮೇಲೆ ಆನೆ ಆಡುತ್ತ ಕಥೆ ಕೇಳುತ್ತಿದ್ದ ದಿನಗಳು, ಅಮ್ಮ ನನ್ನನ್ನು ಸಮಾಧಾನಿಸುತ್ತಿದ್ದ ಬಾಲ್ಯದ ಸುಂದರ ಸವಿ ನೆನಪುಗಳು ನೆನಪಾಗಿ, ಕಣ್ಣೀರು ತರಿಸುವ ಈ ಪದ್ಯ ಎಷ್ಟೊಂದು ಸುಂದರವಾಗಿದೆ. ನನ್ನ ಪ್ರಕಾರ ಮಾನವೀಯ ಮೌಲ್ಯಗಳ ಕಲಿಕೆಗೆ, ಪ್ರಾಮಾಣಿಕತೆಗೆ ಹಿಡಿದ ಕನ್ನಡಿ ಈ ಪುಣ್ಯಕೋಟಿ ಗೋವಿನ ಹಾಡು.<br>
ಮತ್ತೊಮ್ಮೆ ಅಪ್ಪನಿಗಾಗಿ, ಅಮ್ಮನಿಗಾಗಿ, ನನಗಾಗಿ ಮತ್ತು ಈ ಬ್ಲಾಗ್ ಬರಹ ಓದುತ್ತಿರುವ ಎಲ್ಲರಿಗಾಗಿ ಪುಣ್ಯಕೋಟಿ ಗೋವಿನ ಹಾಡಿನ ಸಾಲುಗಳು : </p>
<p dir="ltr">ಧರಣಿ ಮಂಡಲ ಮಧ್ಯದೊಳಗೆ<br>
ಮೆರೆಯುತಿಹ ಕರ್ನಾಟ ದೇಶದೊಲಿರುವ<br>
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು</p>
<p dir="ltr">ಎಳೆಯ ಮಾವಿನ ಮರದ ಕೆಳಗೆ<br>
ಕೊಳಲ್ನುದುತ ಗೊಲ್ಲ ಗೌಡನು<br>
ಬಳಸಿನಿಂದ ತುರುಗಳನ್ನು<br>
ಬಳಿಗೆ ಕರೆದನು ಹರುಷದಿ</p>
<p dir="ltr">ಗಂಗೆ ಬಾರೆ ಗುರಿ ಬಾರೆ<br>
ತುಂಗಭದ್ರೆ ತಾಯಿ ಬಾರೆ<br>
ಪುಣ್ಯಕೋಟಿ ನೀನು ಬಾರೆ<br>
ಎಂದು ಗೊಲ್ಲನು ಕರೆದನು</p>
<p dir="ltr">ಗೊಲ್ಲ ಕರೆದ ದನಿಯ ಕೇಳಿ<br>
ಎಲ್ಲ ಹಸುಗಳು ಬಂದು ನಿಂದು<br>
ಚೆಲ್ಲಿ ಸೂಸಿ ಹಾಲು ಕರೆಯಲು<br>
ಅಲ್ಲಿ ತುಂಬಿತು ಬಿಂದಿಗೆ</p>
<p dir="ltr">ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು.</p>
<p dir="ltr">ಹಬ್ಬಿದ ಮಲೆ ಮಧ್ಯದೊಳಗೆ<br>
ಅರ್ಭುತಾನೆಂದೆಂಬ ವ್ಯಾಘ್ರನು<br>
ಅಬ್ಬರಿಸಿ ಹಸಿಹಸಿದು ಬೆಟ್ಟದ<br>
ಕಿಬ್ಬಿಯೊಳು ತಾನಿದ್ದನು</p>
<p dir="ltr">ಮೊರೆದು ರೋಷದಿ ಗುಡುಗುತ ಹುಲಿ<br>
ಭೋರಿಡುತ ಚಂಗನೆ ಜಿಗಿದು<br>
ನೆಗೆಯಲು ಚೆದರಿ ಹೋದವು ಹಸುಗಳು<br>
ಪುಣ್ಯಕೋಟಿ ಎಂಬ ಹಸುವು<br>
ತನ್ನ ಕಂದನ ನೆನೆದುಕೊಂಡು<br>
ಮುನ್ನ ಹಾಲನು ಕೊಡುವೆನೆನುತ<br>
ಚೆಂದದಿತಾ ಬರುತಿರೆ</p>
<p dir="ltr">ಇಂದೆನಗೆ ಆಹಾರ ಸಿಕ್ಕಿತು<br>
ಎಂದು ಬೇಗನೆ ದುಷ್ಟ ವ್ಯಾಘ್ರನು<br>
ಬಂದು ಬಳಸಿ ಅಡ್ಡಗಟ್ಟಿ<br>
ನಿಂದನ ಹುಲಿರಾಯನು</p>
<p dir="ltr">ಮೇಲೆ ಬಿದ್ದು ನಿನ್ನಲೀಗಲೇ<br>
ಬಿಳಹೊಯ್ವೇನು ನಿನ್ನ ಹೊಟ್ಟೆಯ<br>
ಸೀಳಿಬಿಡುವೆನು ಎನುತ ಕೋಪದಿ<br>
ಕ್ರೂರವ್ಯಾಘ್ರನು ಕೂಗಲು,</p>
<p dir="ltr">ಒಂದು ಬಿನ್ನಹ ಹುಲಿಯೇ ಕೇಳು<br>
ಕಂದನಿರುವನು ದೊಡ್ಡಿಯೊಳಗೆ<br>
ಒಂದು ನಿಮಿಷದಿ ಮೊಲೆಯ ಕೊಟ್ಟು<br>
ಬಂದು ಸೇರುವೆ ನಿಲ್ಲಿಗೆ</p>
<p dir="ltr">ಹಸಿದ ವೇಳೆಗೆ ಸಿಕ್ಕಿದೊಡವೆಯ<br>
ವಶವ ಮಾಡದೇ ಬಿಡಲು ನೀನು<br>
ನುಸುಳಿ ಹೋಗುವೆ ಮತ್ತೆ ಬರುವೆಯ<br>
ಹುಸಿಯ ನುಡಿಯುವೆನೆಂದಿತು</p>
<p dir="ltr">ಸತ್ಯವೇ ನಮ್ಮ ತಾಯಿ ತಂದೆ<br>
ಸತ್ಯವೇ ನಮ್ಮ ಬಂಧು ಬಳಗ<br>
ಸತ್ಯ ವಾಕ್ಯಕೆ ತಪ್ಪಿ ನಡೆದರೆ<br>
ಮೆಚ್ಚನಾ ಪರಮಾತ್ಮನು</p>
<p dir="ltr">ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು</p>
<p dir="ltr">ಕೊಂದು ತಿನ್ನುವೆನೆಂಬ ಹುಲಿಗೆ<br>
ಚೆಂದದಿಂದ ಭಾಷೆ ಕೊಟ್ಟು<br>
ಕಂಡ ನಿನ್ನನು ನೋಡಿ ಪೋಗುವೆ<br>
ನೆಂದು ಬಂದೆನು ದೊಡ್ಡಿಗೆ</p>
<p dir="ltr">ಅರ ಮೊಲೆಯನು ಕುಡಿಯಲಮ್ಮ<br>
ಅರ ಬಳಿಯಲಿ ಮಲಗಲಮ್ಮ<br>
ಅರ ಸೇರಿ ಬದುಕಲಮ್ಮ<br>
ಆರು ನನಗೆ ಹಿತವರು</p>
<p dir="ltr">ಅಮ್ಮಗಳಿರ ಅಕ್ಕಗಳಿರ<br>
ಎನ್ನ ತಾಯೋಡ ಹುಟ್ಟಗಳಿರ<br>
ಕಂದ ನಿಮ್ಮವನೆಂದು ಕಾಣಿರಿ<br>
ತಬ್ಬಲಿಯನಿ ಕರುವನು</p>
<p dir="ltr">ಮುಂದೆ ಬಂದರೆ ಹಾಯಬೇಡಿ<br>
ಹಿಂದೆ ಬಂದರೆ ಒದೆಯಬೇಡಿ<br>
ಕಂದ ನಿಮ್ಮವನೆಂದು ಕಾಣಿರಿ<br>
ತಬ್ಬಲಿಯನಿ ಕರುವನು</p>
<p dir="ltr">ತಬ್ಬಲಿಯು ನೀನಾದೆ ಮಗನೆ<br>
ಹೆಬ್ಬುಲಿಯ ಬಾಯನ್ನು ಹೋಗುವೆನು<br>
ಇಬ್ಬರ ಋಣ ತೀರಿತೆಂದು<br>
ತಬ್ಬಿಕೊಂಡಿತು ಕಂದನ</p>
<p dir="ltr">ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು</p>
<p dir="ltr">ಗೋವು ಕರುವನು ಬಿಟ್ಟು ಬಂದು<br>
ಸಾವಕಾಶವ ಮಾಡದಂತೆ<br>
ಗವಿಯ ಬಾಗಿಲ ಸೇರಿನಿಂತು<br>
ತವಕದಲಿ ಹುಲಿಗೆಂದಿತು</p>
<p dir="ltr">ಖಂಡವಿದೆಕೋ ಮಾಂಸವಿದೆಕೋ<br>
ಗುಂಡಿಗೆಯ ಬಿಸಿರಕ್ತವಿದೆಕೋ<br>
ಚಂಡ ವ್ಯಾಗ್ರನೆ ನಿನಿದೆಲ್ಲವ<br>
ನುಂಡು ಸಂತಸದಿಂದಿರು</p>
<p dir="ltr">ಪುಣ್ಯಕೋಟಿಯ ಮತ ಕೇಳಿ<br>
ಕಣ್ಣನಿರನು ಸುರಿಸಿ ನೊಂದು<br>
ಕನ್ನೆಯಿವಳನು ಕೊಂದು ತಿಂದರೆ<br>
ಮೆಚ್ಚನಾ ಪರಮಾತ್ಮನು</p>
<p dir="ltr">ಎನ್ನ ಒಡಹುಟ್ಟಕ್ಕ ನೀನು<br>
ನಿನ್ನ ಕೊಂದು ಏನ ಪಡೆವೆನು<br>
ಎನ್ನುತ ಹುಲಿ ಹಾರಿ ನೆಗೆದು<br>
ತನ್ನ ಪ್ರಾಣವ ಬಿಟ್ಟಿತು</p>
<p dir="ltr">ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು</p>
<p dir="ltr">ಪುಣ್ಯಕೋಟಿಯು ನಲಿದು ಕರುವಿಗೆ<br>
ಉಣ್ಣಿಸಿತು ಮೊಲೆಯ ಬೇಗದಿ<br>
ಚೆನ್ನಗೊಲ್ಲನ ಕರೆದು ತನು<br>
ಮುನ್ನ ತದಿಂತೆಂಡಿತು</p>
<p dir="ltr">ಎನ್ನ ವಂಶದ ಗೋವ್ಗಲೊಳಗೆ<br>
ನಿನ್ನ ವಂಶದ ಗೊಲ್ಲರೊಳಗೆ<br>
ಮುನ್ನ ಪ್ರತಿ ಸಂಕ್ರಾಂತಿಯೊಳಗೆ<br>
ಚೆನ್ನ ಕೃಷ್ಣನ ಭಜಿಸಿರಿ.</p>
<p dir="ltr">ಪುಣ್ಯಕೋಟಿಯ ಹಾಡು ವೀಕ್ಷಿಸಲು ಯೂಟ್ಯೂಬ್ ಲಿಂಕ್:<br>
http://youtu.be/UOZNmoWirK4 </p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEiTDzSNyicJdXW9CGK_ItsdEWQ65Wa7iP1wpFYkw6AuApjZ5VnaoS6UFOKl9g37I9B0-PQSlheEHaQn8YzFrYF0D5gQgaETVOCVi_namhV1i2xK0JNBrT1VpNoSTGkeer1A0bYNNnGmElpB/s1600/hqdefault.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEiTDzSNyicJdXW9CGK_ItsdEWQ65Wa7iP1wpFYkw6AuApjZ5VnaoS6UFOKl9g37I9B0-PQSlheEHaQn8YzFrYF0D5gQgaETVOCVi_namhV1i2xK0JNBrT1VpNoSTGkeer1A0bYNNnGmElpB/s640/hqdefault.jpg"> </a> </div>Anonymoushttp://www.blogger.com/profile/08569784804915074890noreply@blogger.com0Belgaum, Belgaum15.850499 74.49998tag:blogger.com,1999:blog-5229584388114497227.post-62029478162820274672014-12-07T07:35:00.001-08:002014-12-10T09:31:49.597-08:00ಸರಿ-ತಪ್ಪು ಮತ್ತು ಒಪ್ಪು....<p dir="ltr">ಸರಿ-ತಪ್ಪು ಎನ್ನುವ ಅನುಭವದ ಮಹತ್ತರ ಪಾಠವನ್ನು ಜೀವನದ ತರಗತಿಯಲ್ಲಿ ಎಲ್ಲರೂ ಕಲಿಯಲೇಬೇಕು.<br>
ಸರಿ ಎಂಬುದು ಸರಿ, ತಪ್ಪು ಎಂಬುದು ತಪ್ಪು; ಇದು ಕಾಲ ಸತ್ಯ. <br>
ಈ ಸತ್ಯದ ಅರಿವಿದ್ದರೂ ಕೆಲ ಸಲ ಸರಿಯಾದುದನ್ನು ತಪ್ಪಾಗಿ ತಪ್ಪಾದುದುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಸಂದರ್ಭಗಳು ಒದಗಿ ಬರುತ್ತವೆ.<br>
ಇಂತಹ ಸಮಯದಲ್ಲಿ ಸರಿ-ತಪ್ಪುಗಳು ಎರಡು ವಿಭಿನ್ನ ಆಯ್ಕೆಗಳಾಗಿರುತ್ತವೆ.<br>
ನಮಗೆ ಸರಿ ಕಂಡದ್ದು ಬೇರೆಯವರಿಗೆ ತಪ್ಪಾಗಿ , ಬೇರೆಯವರಿಗೆ ಸರಿ ಕಂಡದ್ದು ನಮಗೆ ತಪ್ಪಾಗಿ ಕಾಣಬಹುದು.<br>
ಹೊಂದಾಣಿಕೆ ಎಂಬುದು ಈ ಸರಿ ತಪ್ಪುಗಳ ಸರಿ ರೂಪ ತೊರುವ ಮಾರ್ಗಸೂಚಿ.<br>
ಹೊಂದಾಣಿಕೆ ಸುಲಭದ ಮಾತೂ ಅಲ್ಲ. ಬೇರೆಯವರ ಅಭಿಪ್ರಾಯ-ಅಭಿರುಚಿಗಳನ್ನು ಗೌರವಿಸುವ ಗುಣವಿದ್ದಲ್ಲಿ ಮಾತ್ರ ಹೊಂದಾಣಿಕೆ ಸಾಧ್ಯ. ಯಾರು ಸರಿ ಯಾರು ತಪ್ಪು ಎಂಬುದಕ್ಕಿಂತ ಯಾವುದು ಸರಿ ಯಾವುದು ತಪ್ಪು ಎನ್ನುವುದು ಮುಖ್ಯ.ಇದನ್ನು ಮನಗಂಡು ಸರಿ-ತಪ್ಪುಗಳನ್ನು ಒಪ್ಪಿದಾಗ ಬಾಳು ಸದಾ ಸಮರಸದ ರಸದೌತಣವಾಗಿರುತ್ತದೆ.</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEgY-PPCWSA6fiTFNhjf14y9icVNexixZOygGhh48ZbN8edgdqHuaBAggn-KvIkCPtWgMwpn2kgCongWOktBPSGr69rI2uHSxf_cH8f_nIfXmTo-zFtSaa6P84EAnqrhZCaH2ZMHZeVlwqTp/s1600/44cb3815b8a904cbdc889d3f882095aa-1.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEgY-PPCWSA6fiTFNhjf14y9icVNexixZOygGhh48ZbN8edgdqHuaBAggn-KvIkCPtWgMwpn2kgCongWOktBPSGr69rI2uHSxf_cH8f_nIfXmTo-zFtSaa6P84EAnqrhZCaH2ZMHZeVlwqTp/s640/44cb3815b8a904cbdc889d3f882095aa-1.jpg"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-20837362391316821362014-12-06T00:17:00.001-08:002014-12-07T07:40:14.634-08:00ಶಾಶ್ವತ ಸುಂದರ ಸತ್ಯ..<p dir="ltr">ಪ್ರೀತಿ ಇರುವವರೆಗೆ ಭಾವನೆ..<br>
ಪ್ರೀತಿನೇ ಇಲ್ಲದಮೇಲೇ..??</p>
<p dir="ltr">ಭಾವನೆಗಳು ಇರುವವರೆಗೆ ಆಸೆ..<br>
ಭಾವನೆಗಳೇ ಇಲ್ಲದಮೇಲೇ ..??</p>
<p dir="ltr">ಆಸೆಗಳು ಇರುವವರೆಗೆ ಕನಸು..<br>
ಆಸೆಗಳೇ ಇಲ್ಲದಮೇಲೇ..??</p>
<p dir="ltr">ಕನಸುಗಳು ಇರುವವರೆಗೆ ಹಂಬಲ<br>
ಕನಸುಗಳೇ ಇಲ್ಲದಮೇಲೇ.??</p>
<p dir="ltr">ಹಂಬಲ ಇರುವವರೆಗೆ ಜೀವಂತಿಕೆ<br>
ಹಂಬಲವೇ ಇಲ್ಲದಮೇಲೇ..??</p>
<p dir="ltr">ಜೀವಾ ಇರೋವರೆಗೂ ಜೀವನ..<br>
ಈ ಜೀವಾನೇ ಹೊರಟುಹೋದ್ರೆ..??</p>
<p dir="ltr">ಬದುಕು ಹೀಗೆ ಉತ್ತರಿಸಲಾಗದ ಕೊನೆಯಿಲ್ಲದ ಅಸಂಖ್ಯ ಪ್ರಶ್ನೆಗಳ ಪಯಣ..!<br>
ಈ ಪಯಣದಲ್ಲಿ ಯಾವುದು ಶಾಶ್ವತವಲ್ಲಾ..<br>
ಅಳುವಾಗ ನಮ್ಮ ಕಣ್ಣ ಹನಿಯೂ ಕೂಡ ನಮ್ಮನೂ ಬಿಟ್ಟು ಹೊರಟು ಹೋಗುತ್ತೆ,<br>
ಸಂಬಂಧಗಳ ಬಂಧನವೂ ನಮ್ಮನ್ನು ಬಂಧಿಸಿಡದು..<br>
ಕತ್ತಲಾದ ಮೇಲೆ ನಮ್ಮ ನೆರಳೆ ನಮ್ಮನ್ನು ಬಿಟ್ಟು ಹೋಗುವುದಲ್ಲವೇ...?? <br>
ಕಷ್ಟಗಳು ಕೂಡ ಹಾಗೆಯೇ, ರಾತ್ರಿಯ ನಂತರ ಹಗಲು ಬರುವಂತೆ ಕಷ್ಟಗಳೂ ಕರಗಿ ಹೋಗುತ್ತವಾದ್ದರಿಂದ ಚಿಂತೆ ದುಃಖ ವ್ಯರ್ಥ..<br>
ಶಾಶ್ವತವಲ್ಲದ ನಾಲ್ಕು ದಿನದ ಈ ಬದುಕಿನಲ್ಲಿ ಎಲ್ಲವೂ ಅಶಾಶ್ವತ..<br>
ಕೊನೆಗಾಲದಲ್ಲಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವ ಈ ಜೀವ ತಾ ಗಳಿಸಿದ ಪ್ರೀತಿ ವಿಶ್ವಾಸ ಸ್ನೇಹ ಸಂಬಂಧಗಳ ಬಂಧ ಪ್ರೀತಿಪಾತ್ರರ ಹೃದಯದ ಕದ ತಟ್ಟಿದ ನೆನಪು ಮಾತ್ರ ಅಜರಾಮರವಾಗಿ ನೆನಪುಗಳ ಗರಿಯಾಗಿ ನವಿರಾಗಿ ಉಳಿಯುವುದು.<br>
ಈ ಸತ್ಯ ಮನವರಿಕೆಯಾದಾಗ ಮಾತ್ರ ಜೀವನ ಸಾರ್ಥಕ ಸುಂದರವಾಗಿರುತ್ತೆ..! :)</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEhFZP0M_FTvMGT4h5J6MduvwPySClbDIut46Vh1a61_KvzYs679Dx8Kdwwxlt888iZIqwIzDf1E_LedE988Cp6xisjhPWZPZ23rEx8mBVr416uhwYVjdEStwcWtY_RJgihid4g8eoEXE9GX/s1600/break-up-Heartbroken-Missing-You-Broken-Hearted-Letting-Go-Sad-Love-quotes-997%2525281%252529.jpeg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEhFZP0M_FTvMGT4h5J6MduvwPySClbDIut46Vh1a61_KvzYs679Dx8Kdwwxlt888iZIqwIzDf1E_LedE988Cp6xisjhPWZPZ23rEx8mBVr416uhwYVjdEStwcWtY_RJgihid4g8eoEXE9GX/s640/break-up-Heartbroken-Missing-You-Broken-Hearted-Letting-Go-Sad-Love-quotes-997%2525281%252529.jpeg"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-18675518952204176702014-12-03T09:02:00.001-08:002014-12-03T09:04:22.593-08:00ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಹೆಣೆಯಲು ಸಜ್ಜಾಗೋಣ :) :)<p dir="ltr"> ಡಿಸೆಂಬರ್... ಹನ್ನೆರಡು ತಿಂಗಳುಗಳ ವರ್ಷದ ಕೊನೆಯ ತಿಂಗಳು. ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತಿರುವ ಈ ತಿಂಗಳಿಗೆ ಸದಾ ಹೊಸತನದ ಆಗಮನದ ಸಂಭ್ರಮ. ಆದರೆ ಬಹುಶಃ ಚಳಿಗಾಲದಲ್ಲಿ ಬರುವುದರಿಂದ ಏನೋ ಗೊತ್ತಿಲ್ಲ ಒಂದು ರೀತಿ ಈ ತಿಂಗಳು ಪ್ರತಿ ಬಾರಿ ಸಂತೋಷದ ಜೊತೆ ಜೊತೆಗೆ ಬೇಸರದ ನಡುಕವನ್ನು ಮೂಡಿಸುತ್ತದೆ.<br>
ಮನಸ್ಸು ಹೊಸತನದ ನಿರೀಕ್ಷೆ, ಹೊಸ ವರ್ಷದಾಗಮನದ ತಯಾರಿ ನಡೆಸಿರುವಾಗ ನಮಗೆ ಗೊತ್ತಿಲ್ಲದಂತೆ ಮನಸ್ಸು ಮಂಕಾಗಿ ಕಳೆದ ಡಿಸೆಂಬರ್ ತಿಂಗಳಿಗೆ ಹಾರಿ ಬಿಡುತ್ತದೆ. ಕಳೆದ ವರ್ಷ ಮಾಡಿದ ಹೊಸ ನಿರ್ಧಾರಗಳು, ನಮಗೆ ನಾವೇ ಕೊಟ್ಟ ಭರವಸೆಗಳು, ಹೊಸ ವರ್ಷದಲ್ಲಿ ಮಾಡಬೇಕಾದ ಪ್ರವಾಸಗಳು, ಹೊಸ ವರ್ಷದಲ್ಲಿ ಓದಬೇಕೆಂದು ನಿರ್ಧರಿಸಿ ನಿಗದಿಪಡಿಸಿದ ಹೊತ್ತಿಗೆಗಳು, ಮಾಡಬೇಕಾದ ಹೊಸ ಕಾರ್ಯಗಳು, ಕೈ ಬಿಡಬೇಕಾದ ಕೆಲ ಅವಗುಣಗಳು, ರೂಢಿಗತ ಮಾಡಿಕೊಳ್ಳಬೇಕಾದ ಕೆಲ ಹೊಸ ಗುಣಗಳು, ಪಾಠಗಳು, ಪರೀಕ್ಷೆ-ನಿರೀಕ್ಷೆ.. ಹೀಗೆ ಕಳೆದ ವರ್ಷದ things to do this year ಅನ್ನೋ ಲಿಸ್ಟ್ ನ ಹತ್ತು ಹಲವು ನೆರವೇರದ ಸಂಗತಿಗಳು ಮನದ ಕಿಟಕಿಯಿಂದ ಹೊರ ಇಣುಕಿ ಅಣುಕುತ್ತಿವೆ.<br>
ಈ ವರ್ಷ ಇದನ್ನು ಖಂಡಿತ ಮಾಡುವೆನು ಎನ್ನುತ್ತ ಪ್ರತಿ ವರ್ಷವೂ ಪ್ರತಿ ಸಲವೂ ನೆರವೇರದ ಸಂಗತಿಗಳ ನೆರವೆರಿಕೆಗೆ ನಮಗೆ ನಾವೇ ಕೊಡುವ ಮಾತಿನ ಭರವಸೆ ಹೇಳು ಹೆಸರಿಲ್ಲದೆ ಪಲಾಯನವಾದ ಪಾಲಿಸುವ, ಅಪೂರ್ಣವಾಗಿ ಉಳಿದ ವಿಷಯಗಳು, ಕೆಲವು ಸಲ ಇವೆಲ್ಲ funny ಅನ್ನೋ feel ಮೂಡಿಸಿದರೂ ಅದನ್ನೆಲ್ಲ ಸೀರಿಯಸ್ ಆಗಿ ಪರಿಗಣಿಸಲೇಬೇಕು.<br>
ಇವೆಲ್ಲದರ ನಡುವೆ ಈ ವರ್ಷ ಕೊನೆಗೊಳ್ಳುತ್ತಿದೆ ಅನ್ನೋದು ನಂಬಲಸಾಧ್ಯ. ಪರಿಪೂರ್ಣವಾಗಿ ಕಾರ್ಯಗತಗೊಳಿಸಿದ ಕೆಲ ಸಂಗತಿಗಳ ಹೆಮ್ಮೆ ಒಂದೆಡೆಯಾದರೆ ಮತ್ತೊಂದೆಡೆ ಮನಸ್ಸು ಮತ್ತೊಂದು ಹೊಸ ಆಶಯಗಳ, ಹಳೆಯ ಅಪೂರ್ಣ ಕಾರ್ಯಗಳ ಪೂರ್ಣಗೊಳಿಸುವ ಭರವಸೆಗಳ, ಮತ್ತಷ್ಟು ಹೊಸ ನಿರ್ಧಾರ ಕನಸುಗಳ ಪಟ್ಟಿ ಸಿದ್ಧವಾಗುತ್ತಿದೆ. ಇವೆಲ್ಲವನ್ನೂ ನನಸುಗೊಳಿಸೋ ಆಸೆ ಆಶಾವಾದಿಗಳದ್ದಾದರೆ ಆಯುಷ್ಯದಲ್ಲಿ ಒಂದು ವರ್ಷ ಕಡಿಮೆಯಾಯಿತು ಅನ್ನೊ ಗೋಳು ನಿರಾಶಾವಾದಿಗಳದ್ದು. <br>
ಏನೇ ಆಗಲಿ ಪ್ರತಿ ಕ್ಷಣ ಪ್ರತಿ ದಿನ ಪ್ರತಿ ವರ್ಷ ಎಲ್ಲ ಹೊಸ ಹೊಸತು..<br>
ಹೊಸ ವರ್ಷದ ಬಾಗಿಲಲ್ಲಿ ಹೊಸ ಕನಸುಗಳೊಂದಿಗೆ ಹೊಸ ವರ್ಷದ ಬಾಗಿಲು ತೆರೆದು ಸಂಭ್ರಮಿಸಲು ಕುಟುಂಬ, ಸ್ನೇಹಿತರು, ಬಂಧುಗಳು, ನ್ಯೂ ಇಯರ್ ಪಾರ್ಟಿ, ಫಾರ್ಮ್ ಹೌಸ್ ಹೀಗೆ so many choices... :) :)<br>
ಈ ವರ್ಷ ಕೊನೆಗೊಳ್ಳುತ್ತಿದೆ ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಹೆಣೆಯಲು ಸಜ್ಜಾಗೋಣ :) :)</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEjZaxBSFPPuEi0BSeQtCEbU7CVk-jZp65P9Nd7r4KiBckD2qhFXe9EImQYF3LHP4tjI32vc1fbfYVL_WcMeeCFynxT3n-pcKW8aMVXBpP2vFf6yhFgmVwmSBA2JMct4wvHKm0kdkni0Xwys/s1600/IMG_171599119232615.jpeg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEjZaxBSFPPuEi0BSeQtCEbU7CVk-jZp65P9Nd7r4KiBckD2qhFXe9EImQYF3LHP4tjI32vc1fbfYVL_WcMeeCFynxT3n-pcKW8aMVXBpP2vFf6yhFgmVwmSBA2JMct4wvHKm0kdkni0Xwys/s640/IMG_171599119232615.jpeg"> </a> </div>Anonymoushttp://www.blogger.com/profile/08569784804915074890noreply@blogger.com0tag:blogger.com,1999:blog-5229584388114497227.post-80377777316130509002014-11-28T00:26:00.001-08:002014-11-28T00:26:22.422-08:00ನಾವು ನಾವಾಗಿರೋಣ..<p dir="ltr">   ನಾವು ಅವರಂತಿರಬೇಕು ಅವರಂತೆಯೇ ಆಗಬೇಕು ಅವರಂತಹ ಮನೆ ಕಟ್ಟಬೇಕು ಅವರಂತಹ ಕಾರು ಹೊಂದಬೇಕು... ಅಬ್ಬಬ್ಬಾ ಈ ಅವರು ಇವರುಗಳ ಅನುಕರಣೆಯ ಕಾರುಬಾರು ಮಿತಿಮೀರಿದೆ. ಇವೆಲ್ಲದರ ನಡುವೆ ನಾವು ನಮ್ಮ ಸ್ವಂತಿಕೆಯನ್ನೆ ಮರೆತು ಬಿಟ್ಟಿದ್ದೇವೆ.<br>
ನಾವೇಕೆ ಅವರಂತಾಗಬೇಕು? ನಮಗೂ ಒಂದು ಸ್ವಂತ ವ್ಯಕ್ತಿತ್ವವಿದೆ. ನಮ್ಮತನವೆಂಬುದು ನಮ್ಮೊಳಗೆ ಅಡಗಿ ಕುಳಿತಿದೆ. ಅದನ್ನು ದಕ್ಕಿಸಿಕೊಳ್ಳಬೇಕಷ್ಟೆ. ನಾವೆಲ್ಲ ಬೇರೆಯವರ ಮಾದರಿಯಲ್ಲಿ ಬೆಳೆಯಲು ಪೈಪೋಟಿ ನಡೆಸುತ್ತಿದ್ದೇವೆ ಹೊರತು ನಾವೇ ಮಾದರಿಯಾಗಿರಲು ಹಂಬಲವೂ ಇಲ್ಲ ಪ್ರಯತ್ನವೂ ಇಲ್ಲ.<br>
   ಈ ಸಮಾಜ ಜೀವನದಲ್ಲಿ ಸಾಕಷ್ಟು ಮಾದರಿಗಳು ಸಿಗುತ್ತವೆ, ಅವುಗಳಲ್ಲಿ ಅನುಸರಿಸಬೇಕಾದ ಅಂಶಗಳು ಸಾಕಷ್ಟಿರುತ್ತವೆ. ಒಳ್ಳೆಯದನ್ನು ಹೆಕ್ಕಿ ತೆಗೆದುಕೊಳ್ಳೊಣ ಆದರೆ ಅವರೇ ನಾವಾದರೆ ನಮ್ಮದೆನ್ನುವುದೇನು ಉಳಿಯಿತು? ಒಳ್ಳೆಯದೆಲ್ಲರ ಕ್ರೋಢಿಕರಣದ ರೂಪ ನಮ್ಮೊಳಗೆ ಇಣುಕಲಿ ಅದರೊಂದಿಗೆ ನಮ್ಮತನವೆಂಬ ಸ್ವಂತಿಕೆಯೂ ವಿಜೃಂಭಿಸಲಿ. ವೈವಿಧ್ಯತೆಯಲ್ಲೂ ಏಕತೆ ಮೆರೆವ ಈ ಜಗತ್ತಿನಲ್ಲಿ ಅದೆಷ್ಟೋ ಬಾರಿ ನಾವು ಎಲ್ಲೋ ಕಳೆದು ಹೊಗಿರುತ್ತೇವೆ. ನಮ್ಮ  ಸ್ವಂತ identity ಅನ್ನೋದೆ ಮರೆತಿರುತ್ತೆ.ಅದನ್ನು ಗಳಿಸೊದಷ್ಟೇ ಅಲ್ಲ ಊರ್ಜಿತಗೊಳಿಸೋದು ನಿಜವಾದ ಸವಾಲು.<br>
   ಎಲ್ಲರಿಂದ ಇದು ಸಾಧ್ಯವಿಲ್ಲ, ನಾನೇನು ಮಹಾನುಭಾವ ಎನಿಸಿಕೊಳ್ಳಬೇಕಿಲ್ಲ, ನಾನು ಯಾವುದಕ್ಕೂ ಮುಂದಾಳತ್ವ ವಹಿಸಬೇಕಿಲ್ಲ, ಬದುಕಿದಷ್ಟು ದಿನ ನನ್ನ ಪಾಡಿಗೆ ನಾನಿದ್ದುಬಿಡುತ್ತೇನೆ ಅನ್ನೊದ್ರಲ್ಲಿ ಏನು ವಿಶೇಷವಿದೆ? ಪ್ರಾಣಿಗಳೂ ಹಾಗೆಯೇ ಬದುಕುತ್ತವೆ ಅಲ್ಲವೇ? ಹಾಗಿದ್ದಲ್ಲಿ ನಮಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ ಉಳಿದಂತಾಯ್ತು?<br>
   ಈ ಬದುಕಿನಲ್ಲಿ ನಾವು ನಾವಾಗಿ ಬಾಳಬೇಕು. ನಮ್ಮ ನಂತರವೂ ನಮ್ಮತನ ಉಳಿಯಬೇಕು.<br>
ನಮ್ಮೊಳಗಿನ ನಮಗೆ ಯಾವತ್ತೂ ಅಳಿವೆನ್ನುವುದು ಇರಲೇಬಾರದು ಎಂದು ನಿರ್ಧಾರ ಮಾಡಿ ಸಕಾರಾತ್ಮಕ ಮಾರ್ಗವನ್ನೇ ಸದಾ ಅನುಸರಿಸೊಣ. <br>
ಅವರಿವರ ಸಂತೆ ಬಿಟ್ಟು copy cats ಆಗೊ ಬದಲು copyrighted ಆಗಿರೊಣ......��</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEikUNkOBQMA-NqWfdfserLFHhoXyyuYM5Cm2u7RfwV8Wz-T3HxM2IeSbNYfaie4xwI2uctL89CbEVFnp1iB9LCoPl3i5ZXyNYJcjcfryElbl9APTPcJXnr6Jf8Y7qEmX8WpD_V6ArFnTBul/s1600/1622769_710422309022506_353860781_n.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEikUNkOBQMA-NqWfdfserLFHhoXyyuYM5Cm2u7RfwV8Wz-T3HxM2IeSbNYfaie4xwI2uctL89CbEVFnp1iB9LCoPl3i5ZXyNYJcjcfryElbl9APTPcJXnr6Jf8Y7qEmX8WpD_V6ArFnTBul/s640/1622769_710422309022506_353860781_n.jpg"> </a> </div>Anonymoushttp://www.blogger.com/profile/08569784804915074890noreply@blogger.com4Belagavi,15.8896 74.54455tag:blogger.com,1999:blog-5229584388114497227.post-27409670665749336952014-11-11T10:24:00.001-08:002014-11-11T10:29:16.705-08:00ಖುಷಿ unlimited.....<p dir="ltr">ಇವತ್ತು ಬೆಳಿಗ್ಗೆ ನನ್ನ ಕೊಲಿಗ್ ಒಬ್ರು ಕೇಳ್ತಾ ಇದ್ರು <br>
'ಏನ್ ಮೇಡಂ ಖುಷಿ-ಖುಷಿಯಾಗಿದ್ದಿರಿ, ಎನ್ ಸ್ಪೆಷಲ್ ?' ಅಂತ, ನನಗೆ ಆಶ್ಚರ್ಯ ಆಯ್ತು, ಖುಷಿಯಾಗಿರೋಕು ಒಂದು ಕಾರಣ ರೀಸನ್ ಅಂತ ಸ್ಪೆಷಲ್ ಆಗಿ ಬೇಕಾ? Actually ಖುಷಿ ಡಿಫೈನ್ ಮಾಡೋದು ತುಂಬಾ ಕಷ್ಟ. ಖುಷಿ ಅನ್ನೋದು ಲೈಫಲ್ಲಿ ಒಂಥರಾ ಆಕ್ಸಿಜನ್ ಇದ್ದಂತೆ ಪೂರೈಕೆ ಕಡಿಮೆ ಆದಷ್ಟು ಆಯಸ್ಸು ಕುಂಠಿತ ಆಗುತ್ತೆ. ಖುಷಿಯಾಗಿರೋದೆ ಜೀವನ ಹೊರತು ಖುಷಿನ ಹುಡುಕುವುದ್ರಲ್ಲೇ ಕಾಲ ಕಳೆಯೋದು ಜೀವನ ಅಲ್ಲ.<br>
ಖುಷಿ ಅನ್ನೋದು ಹುಡುಕ್ತಾ ಹೋಗೊ ವಸ್ತುನೂ ಅಲ್ಲ ಆದರೆ ನಮ್ಮೊಳಗಿರುವ ಮನದ ಒಂದು ಭಾವ.<br>
ಖುಷಿ ಪರ್ಫ್ಯೂಮ್ ಇದ್ದ ಹಾಗೆ ಹೊದಲ್ಲೆಲ್ಲ ಖುಷಿಯ ಪರಿಮಳ ಪಸರಿಸಬಲ್ಲದು.. ನಾವೆಷ್ಟೇ ಒತ್ತಡದಲ್ಲಿ ಇದ್ದಾಗ ಒಂದು ಸುಂದರ ಸ್ಮೈಲಿಯನ್ನೋ ಅಥವಾ  ಕುಟುಂಬದ/ಪ್ರಿಯವಾದವರ ಫೊಟೊ ನೋಡಿ, ನಮಗೆ ಗೊತ್ತಿಲ್ದೇ  ಒಂದು  ಸ್ಟೈಲ್ ನಮ್ಮ ಮುಖದಲ್ಲೂ ಹಾದು ಹೋಗಿರುತ್ತೆ, ಹಾಗೇ ಒಂದು ಮುಗ್ಧ ಮಗುವಿನ ನಗು ನೋಡಿದಾಗ, ಕುಟುಂಬದ ಸದಸ್ಯರು/ಸ್ನೇಹಿತರು ಹರಟುತ್ತ ನಗುತ್ತಿರೋವಾಗ ಕಾರಣ ತಿಳಿದೇ ಇದ್ರೂ ನಾವೂ ಅವರೊಟ್ಟಿಗೆ ನಕ್ಕುಬಿಡುತ್ತೇವೆ. ಇದೇ ತಾನೇ ಖುಷಿಯ ಮ್ಯಾಜಿಕ್?<br>
ಖುಷಿಗೆ ಹಲವು ಮುಖಗಳು. ಕೆಲವರಿಗೆ ಖುಷಿ ಅಂದ್ರೆ ಫೈವ್ ಸ್ಟಾರ್ ಹೋಟೆಲ್ ಊಟ, ಇನ್ನು ಕೆಲವರಿಗೆ ಬೀದಿ ಬದಿಯ ಪಾನಿ ಪೂರಿ. ಕೆಲವರಿಗೆ ಮಾರಿಷಸ್ ನಲ್ಲಿ ರಜೆ ಕಳೆಯೊದಾದ್ರೆ ಇನ್ನು ಕೆಲವರಿಗೆ ರಜೆಯ ಎಲ್ಲ ದಿನಗಳನ್ನು ಊರಲ್ಲಿರೋ ಅಮ್ಮ ಅಪ್ಪ ಕುಟುಂಬದೊಂದಿಗೆ ಕಳೆಯೋದು. ಹೀಗೆ ಹಲವು ರೀತಿ..<br>
ನನಗಂತೂ ಖುಷಿ ಅಂದ್ರೆ ಪುಟ್ಟ ಪುಟ್ಟ ಸಂಗತಿಗಳಲ್ಲಿ ಖುಷಿ ಕಾಣೋದು, ಖುಷಿಯಾಗಿರೋದು, ಅಪ್ಪ ಅಮ್ಮ ತಂಗಿಯರೊಡನೆ ಕಾಲ ಕಳೆಯೋದು, ಗಾಡ್ಸ ಗಿಫ್ಟ್ ಅನ್ನೊ ತರಹ ಸಿಕ್ಕಿರೊ ಬಿಗ್ ಜಾಯಿಂಟ್  ಫ್ಯಾಮಿಲಿ ಜೊತೆ ಎಂಜಾಯ್ ಮಾಡೋದು, ಪ್ರಕೃತಿನಾ ಆಸ್ವಾದಿಸೋದು, ಸುಂದರ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯೋದು,<br>
ಬೆಸ್ಟ್ ಫ್ರೆಂಡ್ಸ ಜೊತೆ ಕೆಲ ಹೊತ್ತು ಮಾತು ಹರಟೆ,<br>
ಪುಸ್ತಕಗಳ ಲೋಕದಲ್ಲಿ ಮುಳುಗಿ ಹೋಗೋದು,ಓದು-ಬರಹ, ಒಂದಿಷ್ಟು ಒಳ್ಳೆ ಸಿನಿಮಾ ಸಂಗೀತ ಕೇಳೊದು, ನನ್ನ ಫೆವರಿಟ್ ಮ್ಯೂಸಿಕ್ ಲಿಸ್ಟ್ ರಿಪ್ಲೇ ಮಾಡೋದು.... ಹೀಗೆ ಖುಷಿ unlimited.. :)</p>
<p dir="ltr"><a href="http://archanapujar.blogspot.in">ಖುಷಿಯ ಹುಡುಕಾಟ ನಿಲ್ಲಿಸಿ ಖುಷಿಯಾಗಿರಿ ಖಂಡಿತ ಖುಷಿ ನಿಮ್ಮನ್ನೇ ಹುಡುಕಿಕೊಂಡು ಬರುತ್ತೆ..</a><br>
So be happy always..��<br>
Sabbe satta bhavanthu sukhitatta..��<br>
May all beings be happy.. :) :)</p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEjEDWShu9Yz5lOrbThZRbTT9wIt9nA_k-thhIDq_uP3BP0Wojtd6NcdxIZeDMMrkJInnqltBbI7FO0qZOp8YEbC4d2f3eShI7XEHaMJNlvWS0qTj-jPe0iEZYhEiZJf9uXfiGDUK8eXsoIO/s1600/ERICAU8A16VCA0RHUXDCA8BUV3LCAECHKQUCAC78P9ZCAGQGDPXCAYUUTXSCASI3GBBCAPYT2V9CAF3IR1KCAL3OIBHCAB73QI4CAIM1FZFCA1P5EL9CAZXI5KDCA6U018DCA7NQ0V9CA6BUNEECAE18X9N.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEjEDWShu9Yz5lOrbThZRbTT9wIt9nA_k-thhIDq_uP3BP0Wojtd6NcdxIZeDMMrkJInnqltBbI7FO0qZOp8YEbC4d2f3eShI7XEHaMJNlvWS0qTj-jPe0iEZYhEiZJf9uXfiGDUK8eXsoIO/s640/ERICAU8A16VCA0RHUXDCA8BUV3LCAECHKQUCAC78P9ZCAGQGDPXCAYUUTXSCASI3GBBCAPYT2V9CAF3IR1KCAL3OIBHCAB73QI4CAIM1FZFCA1P5EL9CAZXI5KDCA6U018DCA7NQ0V9CA6BUNEECAE18X9N.jpg"> </a> </div>Anonymoushttp://www.blogger.com/profile/08569784804915074890noreply@blogger.com2tag:blogger.com,1999:blog-5229584388114497227.post-18332381178000765062014-11-09T05:29:00.001-08:002014-11-10T01:38:02.093-08:00ಹಾಗೆ ಸುಮ್ಮನೆ....<p dir="ltr">ಬದುಕು ಈ ನಡುವೆ ನನಗೆ ತಿಳಿಯದಂತೆ ಮಿಂಚಿನ ಓಟಕ್ಕಿಳಿದಿದೆ.. ಕಾಲೇಜು-ಮನೆ,ಪಾಠ-ತರಗತಿ, ಓದುಗಳ ಮಧ್ಯೆ ಸಮಯ ಸಾಗುವ ಪರಿ ಅರಿವಿಗೆ ಬರುತ್ತಿಲ್ಲ.. ದಿನನಿತ್ಯದ ಆದ್ಯತೆಗಳ ನಡುವೆ ನಾನೆಲ್ಲೋ ಕಳೆದು ಹೋಗುತ್ತಿರುವ ಭಾವ ಕಾಡುತ್ತಿದೆ..<br>
ಸುಂದರ ಸೂರ್ಯೋದಯ ಸೂರ್ಯಾಸ್ತ ನೋಡದೇ <br>
ದಿನಗಳೇ ಕಳೆದವು, ಈ weekend ಖಂಡಿತ ಊರಿಗೆ ಬರುವೆ plan pakka ಅಂತ ಅಣ್ಣ-ಅಕ್ಕಂದಿರಿಗೆ <br>
ಕೊಟ್ಟ ಭರವಸೆಗೆ, ಅಮ್ಮ- ಅಪ್ಪ ಪುಟ್ಟ ತಂಗಿಯರ ಜೊತೆ ಕುಳಿತು ಹರಟೆ ಹೊಡೆದು ಸುಮಾರು ತಿಂಗಳುಗಳೇ ಉರುಳಿದವು.. ಅಬ್ಬಾ ಈ ಸಮಯ ಅನ್ನೋದು ಮಾರ್ಕೆಟ್ನಲ್ಲಿ ಸಿಗುವ ವಸ್ತುವಾಗಿದ್ರೆ ನಾನೇ ಎಲ್ಲ ಖರೀದಿ ಮಾಡಿ ಬಿಡ್ತಿದ್ನೇನೋ... <br>
ಸಮಯ ಸಿಕ್ಕಾಗಲೆಲ್ಲ ತೋಚಿದ್ದು ಗೀಚಲು, ಒಂದಿಷ್ಟು ಕನಸು,ಮಾತು,ಕಥೆ,ಚಿತ್ರ,ಸ್ಪೂರ್ತಿ, ಭಾವನೆಗಳಿಗೆ ಅಚ್ಚೊದಗಿಸುವ ನಿಟ್ಟಿನಲ್ಲಿ ಬ್ಲಾಗ್ ಬರೆಯುವ ಪ್ರಯತ್ನ..<br>
ನಾನು ತೋಚಿದ್ದನ್ನು ಗೀಚಿದಾಗಲೆಲ್ಲ ನನ್ನನ್ನು ಪ್ರೀತಿಯಿಂದ ಬರೆಯುವ ಪ್ರಯತ್ನಕ್ಕೆ ಪ್ರೇರೆಪಿಸಿದ ನನ್ನ ಅಪ್ಪ-ಅಮ್ಮ ,ಮುದ್ದು ತಂಗಿಯರು, ಅಣ್ಣ ಅಕ್ಕಂದಿರು ಮತ್ತು ಎಲ್ಲ ಸಹೃದಯಿಗಳಿಗೆ, ಅಕ್ಕನ ಪುಟ್ಟ ಪಾಪು <br>
"ಸಮನ್ವಿತಾ"ಳಿಗೆ ಈ ಬ್ಲಾಗ್ ನ ಮೊದಲ ಪುಟ ಸಮರ್ಪಣೆ..<br>
ಹಾಗೆ ಸುಮ್ಮನೆ ಒಂದಿಷ್ಟು ಕನಸು ಸ್ಪೂರ್ತಿ ಮಾತುಗಳ ಅಭಿಪ್ರಾಯ ಅನಿಸಿಕೆಗಳ ಚಿತ್ರ-ಕಥೆ ಭಾವ-ಲಹರಿ ಇಂದಿನಿಂದ..</p>
<div class="separator" style="clear: both; text-align: center;"> <a href="http://lh3.ggpht.com/-cIXpTJpAblQ/VF9sNOJPl_I/AAAAAAAAB1c/L0wAYwL5yNA/s1600/PicsArt_1415520784819.jpg" imageanchor="1" style="margin-left: 1em; margin-right: 1em;"> <img border="0" src="http://lh3.ggpht.com/-cIXpTJpAblQ/VF9sNOJPl_I/AAAAAAAAB1c/L0wAYwL5yNA/s640/PicsArt_1415520784819.jpg"> </a> </div>Anonymoushttp://www.blogger.com/profile/08569784804915074890noreply@blogger.com6Belgaum,15.8896 74.54455